
ಹುಬ್ಬಳ್ಳಿ: ಹುಬ್ಬಳ್ಳಿಯ ಚೈತ್ರಾ ಕನ್ನಡ ಕಾನ್ವೆಂಟ್ ಶಾಲೆಯ ಇಬ್ಬರು ವಿದ್ಯಾರ್ಥಿಗಳ ಶಿಕ್ಷಣ ಶುಲ್ಕವನ್ನು ‘ಚಿಲ್’ ವಾಟ್ಸ್ ಆ್ಯಪ್ ಗ್ರೂಪ್ ಪ್ರಾಯೋಜಿಸಿದ್ದು, ಸಂಬಂಧಿಸಿದ ಮೊತ್ತದ ಚೆಕ್ ಅನ್ನು ವಿದ್ಯಾರ್ಥಿಗಳ ಪೋಷಕರಿಗೆ ಬುಧವಾರ ಹಸ್ತಾಂತರಿಸಲಾಯಿತು.
ಶಾಲೆಯ ಮುಖ್ಯಶಿಕ್ಷಕಿ ಮಹೇಶ್ವರಿ ಹಿರೇಮಠ ಅವರ ಸಮ್ಮುಖದಲ್ಲಿ ಚೆಕ್ ನೀಡಲಾಯಿತು. ಚಿಲ್ ಗ್ರೂಪ್ನ ಸದಸ್ಯರಾದ ಕಾರ್ಪೊರೇಟರ್ ಶಿವು ರಾಯನಗೌಡರ್, ಎಪಿಎಂಸಿ ಮಾಜಿ ನಿರ್ದೇಶಕ ಜಗನ್ನಾಥ ಸಿದ್ಧನಗೌಡರ್, ನಂದಾ ಆನೇಗುಂದಿ, ರಂಜಿತಾ ಅಮ್ಮಿನಭಾವಿ, ಮೇಘನಾ ಲೊಡಯಾ, ಮಿನಲ ಶಾ, ಮೇಘನಾ ಆರ್.ಸಿ, ಅಮಿತ್ ಕುಲಕರ್ಣಿ, ಡಾ.ಸಂದೀಪ ಕುಲಕರ್ಣಿ, ವಾಸುದೇವ ವಡ್ಡೇರ, ಪ್ರವೀಣ ಶೆಟ್ಟರ್, ಹರೀಶ ಜೋಶಿ, ಮಾಲತೇಶ ಕುಲಕರ್ಣಿ, ಸಂಜೀವ ಅಚಲಕರ, ಸಿದ್ಧಾರ್ಥ ಮುತ್ತಗಿ ಮುಂತಾದವರು ಇದ್ದರು.
ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವ ಇಂತಹ ಸಮಾಜಮುಖಿ ಕಾರ್ಯಗಳನ್ನು ಮುಂದುವರಿಸುವುದಾಗಿ ‘ಚಿಲ್’ ಗ್ರೂಪ್ನ ಸದಸ್ಯರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.