ಅಳ್ನಾವರ: ಕಲಘಟಗಿ ಮತ ಕ್ಷೇತ್ರದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಡಿಜಿಟಲ್ ಸದಸ್ಯತ್ವ ನೋಂದಣಿ ಆಭಿಯಾನ ನಡೆಯಿತು.
ಮುಗದ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಮುಗದ ಹಾಗೂ ಕಲಕೇರಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶಗೌಡ ಕರಿಗೌಡರ ಚಾಲನೆ ನೀಡಿ ಮಾತನಾಡಿ ’ಮುಂಬರುವ ದಿನಗಳಲ್ಲಿ ಜನರ ಒಲವು ಕಾಂಗ್ರೆಸ್ ಪರ ಇದೆ. ಆದ್ದರಿಂದ ಸದಸ್ಯತ್ವ ಮಾಡಿಸಿ’ ಎಂದು ತಿಳಿಸಿದರು.
ಕೆಪಿಸಿಸಿ ಉಸ್ತುವಾರಿಗಳಾದ ಪ್ರಕಾಶಗೌಡ ಪಾಟೀಲ, ಧ್ರುತಿ ಸಾಲಮನಿ, ಮಾಜಿ ಸಚಿವ ಸಂತೋಷ್ ಲಾಡ್ ಅವರ ಆಪ್ತ ಕಾರ್ಯದರ್ಶಿ ಶ್ರೀಕಾಂತ ಗಾಯಕವಾಡ, ಮುಖಂಡರಾದ ಮಲ್ಲನಗೌಡ ಪಾಟೀಲ, ರುದ್ರಪ್ಪ ಕೊಂಪನ್ನವರ, ರವಿ ಕಸಮಳಗಿ, ಸಹದೇವ ಪಾಗೋಜಿ, ದೇವರಾಜ ಪರಸಪ್ಪವರ, ಅಶೋಕ ಹನಮೂರ, ನಾಗರಾಜ ತಳ್ಳಿಹಾಳ, ನಾಮದೇವ ಭೋವಿ, ಸುಭಾಷ ಮುಮ್ಮಿಗಟ್ಟಿ, ದೀಪಕ ದುರ್ಗಾಯಿ, ವಿರೇಶ ರಶ್ಮಿ, ದನರಾಜ ಬಡಿಗೇರ, ಸೋಮು ಧಾರವಾಡ, ಸೋಮನಿಂಗ್ ಮರೆವಾಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.