ಹುಬ್ಬಳ್ಳಿ: ಇಲ್ಲಿನ ನೇಕಾರ ನಗರದ ಶ್ರೀರಾಮ ಕಾಲೊನಿ ಮುಖ್ಯರಸ್ತೆಯಿಂದ ಬಾಲಾಜಿ ಕಾಲೊನಿಯ ಶ್ರೀಮಾತಾ ಹಿಂಗೂಲಾಂಬಿಕಾ ದೇವಸ್ಥಾನದವರೆಗೆ ಕೈಗೊಂಡಿರುವ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಪ್ರಸಾದ ಅಬ್ಬಯ್ಯ ಚಾಲನೆ ನೀಡಿದರು. ₹30 ಲಕ್ಷ ವೆಚ್ಚದಲ್ಲಿ ಡಾಂಬರೀಕರಣವಾಗಲಿದೆ.
ಬಳಿಕ ಮಾತನಾಡಿ ’ಈ ಹಿಂದೆ ಹಿಂಗೂಲಾಂಬಿಕಾ ದೇವಿ ದೇವಸ್ಥಾನದ ಕಳಸಾರೋಹಣ ಹಾಗೂ ಪಲ್ಲಕ್ಕಿ ಉತ್ಸವ ಸಮಾರಂಭದಲ್ಲಿ ಜನಕ್ಕೆ ನೀಡಿದ ಆಶ್ವಾಸನೆಯಂತೆ ಇದೀಗ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದೇನೆ’ ಎಂದರು.
ಪಾಲಿಕೆ ಸದಸ್ಯರಾದ ಶಾಂತಾ ಹಿರೇಮಠ, ಶಿವಗಂಗಾ ಮಾನಶೆಟ್ಟರ್, ನಿರಂಜನ ಹಿರೇಮಠ, ಪಾಲಿಕೆ ಮಾಜಿ ಸದಸ್ಯ ಮೋಹನ ಅಸುಂಡಿ, ರಾಜಕುಮಾರ ಕಾಮರೆಡ್ಡಿ, ಮುಖಂಡರಾದ ಕುಶಾಲರಾವ್ ಬೇದರೆ, ಬಾಲಚಂದ್ರ ಕಠಾರೆ, ಗಣೇಶ ಟಿಕಾರೆ, ರಾಕೇಶ ಪಲ್ಲಾಟೆ, ಬಾಗಣ್ಣ ಬಿರಾಜದಾರ, ಶಿವಯ್ಯ ಹಿರೇಮಠ, ಎಂ.ಎ. ವಾರಿಮನಿ, ತಿಪ್ಪಣ್ಣ ಹೊನ್ನಳ್ಳಿ, ಮಂಜುನಾಥ ಪುಲಪಾಟಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.