ADVERTISEMENT

ಕಣ್ಣು ತಪಾಸಣೆ, ಕನ್ನಡಕ ವಿತರಣೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2023, 6:27 IST
Last Updated 11 ಜನವರಿ 2023, 6:27 IST
ಅಳ್ನಾವರದ ಮಿಲ್ಲತ್ ಆಸ್ಪತ್ರೆಯಲ್ಲಿ ನೇತ್ರ ತಪಾಸಣೆ ನಡೆಯಿತು
ಅಳ್ನಾವರದ ಮಿಲ್ಲತ್ ಆಸ್ಪತ್ರೆಯಲ್ಲಿ ನೇತ್ರ ತಪಾಸಣೆ ನಡೆಯಿತು   

ಅಳ್ನಾವರ: ಕೃಷಿ, ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಮಾಜಿ ಸಚಿವ ಸಂತೋಷ್ ಲಾಡ್ ಅವರ ಜನಪರ ಕಾರ್ಯಗಳು ಶ್ಲಾಘನೀಯ ಎಂದು ಮಿಲ್ಲತ್ ಆಸ್ಪತ್ರೆ ಸಮಿತಿ ಅಧ್ಯಕ್ಷ ಎಂ.ಎಂ. ತೇಗೂರ ಹೇಳಿದರು.

ಸಂತೋಷ್ ಲಾಡ್ ಪ್ರಾಯೋಜಕತ್ವ
ದಲ್ಲಿ ಜನರ ಕಣ್ಣು ತಪಾಸಣೆಗಾಗಿ ವಿನ್ಯಾಸ
ಗೊಳಿಸಿದ ವಿಶೇಷ ಬಸ್‌ನಲ್ಲಿ ಇಲ್ಲಿನ ನೆಹರೂ ನಗರ ಬಡಾವಣೆಯ ಮಿಲ್ಲತ್ ಆಸ್ಪತ್ರೆ ಆವರಣದಲ್ಲಿ ಕಣ್ಣು ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಶಿಬಿರದಲ್ಲಿ 213 ಜನರ ತಪಾಸಣೆ ನಡೆಯಿತು. ಅಗತ್ಯ ಇರುವವರಿಗೆ ಉಚಿತ
ವಾಗಿ ಕನ್ನಡಕ ವಿತರಣೆ ಮಾಡಲಾಗು
ವುದು ಹಾಗೂ ಶಸ್ತ್ರಚಿಕಿತ್ಸೆ ಸಹ ನಡೆಸಲಾಗುವುದು’ ಎಂದು ಸಂತೋಷ್ ಲಾಡ್ ಅವರ ಆಪ್ತ ಕಾರ್ಯದರ್ಶಿ ಶ್ರೀಕಾಂತ ಗಾಯಕವಾಡ ತಿಳಿಸಿದರು.

ADVERTISEMENT

ಹುಬ್ಬಳ್ಳಿಯ ಐ ಕೇರ್ ದೃಷ್ಟಿ ಕೇಂದ್ರದ ಡಾ. ಮಾಲತೇಶ, ಡಾ. ಬಿ. ನಕ್ಷತ್ರ, ಜಿ. ಪಾರ್ಥಸಾರ್ಥಿ, ಕೆ.ಸುವರ್ಣಾ, ಶಬಾ ಪೂಲುಸ್ ತಪಾಸಣೆ ನಡೆಸಿದರು. ಹಸನಅಲಿ ಶೇಖ್‌, ಅನ್ವರಖಾನ ಬಾಗೇವಾಡಿ, ಮೆಹಮೂದ್ ಬಾಗವಾನ್, ಮುಕ್ತುಂ ಹುದಲಿ, ಬಿ.ಡಿ. ದಾಸ್ತಿಕೊಪ್ಪ, ಸತ್ತಾರ ಬಾತಖಂಡಿ, ಡಾ. ಚೇತನ, ಆಕಾಶ ಜನಕಾಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.