ADVERTISEMENT

ಹುಬ್ಬಳ್ಳಿ: ಮಯೂರೋತ್ಸವದಲ್ಲಿ ಗಾಯಕ ವೆಂಕಟೇಶಕುಮಾರಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2022, 7:41 IST
Last Updated 14 ಡಿಸೆಂಬರ್ 2022, 7:41 IST
ಡಿ.‌16ರಂದು ಸಂಜೆ 3.30ಕ್ಕೆ ಮಯೂರೋತ್ಸವ-2022 ಕಾರ್ಯಕ್ರಮ
ಡಿ.‌16ರಂದು ಸಂಜೆ 3.30ಕ್ಕೆ ಮಯೂರೋತ್ಸವ-2022 ಕಾರ್ಯಕ್ರಮ   

ಹುಬ್ಬಳ್ಳಿ: 'ಮಯೂರ ನೃತ್ಯ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಡಿ.‌16ರಂದು ಸಂಜೆ 3.30ಕ್ಕೆ ಮಯೂರೋತ್ಸವ-2022 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ' ಎಂದು ಅಕಾಡೆಮಿಯ ಅಧ್ಯಕ್ಷೆ ಹೇಮಾ ವಾಘಮೋಡೆ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಮಯೂರೋತ್ಸವದಲ್ಲಿ ಪದ್ಮಶ್ರೀ ಪುರಸ್ಕೃತ, ಹಿರಿಯ ಗಾಯಕ ಡಾ. ಎಂ. ವೆಂಕಟೇಶಕುಮಾರ ಅವರಿಗೆ ಮಯೂರ ಸನ್ಮಾನ ಮಾಡಲಾಗುವುದು. ಧಾರವಾಡ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಕಕಮಾರ ಬೆಕ್ಕೇರಿ, ಉದ್ಯಮಿ ಡಾ. ವಿ.ಎಸ್.ವಿ. ಪ್ರಸಾದ್, ಎಲ್.ಐ.ಸಿ. ಹುಬ್ಬಳ್ಳಿ ಕಚೇರಿ ವ್ಯವಸ್ಥಾಪಕ ಶಂಕರ ಹೆಗಡೆ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ' ಎಂದರು.

'ಅಕಾಡೆಮಿಯ 365 ಕಲಾವಿದರಿಂದ 35 ನೃತ್ಯ ಪ್ರದರ್ಶನ ನಡೆಯಲಿದೆ. ರಾಮನ ವರ್ಣನೆಯಿರುವ 'ಕೌಸಲ್ಯ ಸುಪ್ರಜಾ' ನೃತ್ಯ ನಾಟಕ ಪ್ರಸ್ತುತಪಡಿಸಲಿದ್ದಾರೆ. ಸಂಜೆ 6ಕ್ಕೆ ಸಭಾಕಾರ್ಯಕ್ರಮ ನಡೆಯಲಿದೆ' ಎಂದು ತಿಳಿಸಿದರು.

ADVERTISEMENT

ಅಕಾಡೆಮಿ ಕಾರ್ಯದರ್ಶಿ ದಿನೇಶವಾಘಮೋಡೆಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.