ADVERTISEMENT

ರಸ್ತೆಯಲ್ಲಿ ಮಹಿಳೆಯ ಕೈ ಹಿಡಿದು ಎಳೆದಾಡಿದ ಜೆಡಿಎಸ್‌ ಮುಖಂಡ ಶ್ರೀಕಾಂತ ಜಮನಾಳ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2021, 2:32 IST
Last Updated 12 ಸೆಪ್ಟೆಂಬರ್ 2021, 2:32 IST
ದೌರ್ಜನ್ಯ (ಸಾಂಕೇತಿಕ ಚಿತ್ರ)
ದೌರ್ಜನ್ಯ (ಸಾಂಕೇತಿಕ ಚಿತ್ರ)   

ಧಾರವಾಡ: ಸತ್ತೂರಿನ ಎಸ್‌ಡಿಎಂ ದಂತ ವೈದ್ಯಕೀಯ ಕಾಲೇಜು ಬಳಿ ಜೆಡಿಎಸ್‌ ಮುಖಂಡಶ್ರೀಕಾಂತ ಜಮನಾಳ‌ ಮಹಿಳೆಯ ಕೈ ಹಿಡಿದು ನಡುರಸ್ತೆಯಲ್ಲೆ ಎಳೆದಾಡಿದ ಪ್ರಕರಣ ನಡೆದಿದೆ.

ಅನುಮತಿ ಅತ್ತಿಗೇರಿ ಎಂಬ ಮಹಿಳೆಮನೆ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ, ಶ್ರೀಕಾಂತ ಮನೆಯೊಳಕ್ಕೆ ನುಗ್ಗಿ ಗಲಾಟೆ ಮಾಡಿದ್ದಾರೆ.ಗಲಾಟೆ ಬಿಡಿಸಲು ಬಂದವರಿಗೆ ಬೆದರಿಕೆ ಹಾಕಿರುವ ಅವರು, ಮಹಿಳೆಯನ್ನು ರಸ್ತೆಯಲ್ಲಿ ಎಳೆದಾಡಿದ್ದಾರೆ. ಈ ವಿಡಿಯೊ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಈ ಕುರಿತು ಅನುಮತಿ ಅತ್ತಿಗೇರಿ ಅವರು ಶುಕ್ರವಾರ ವಿದ್ಯಾಗಿರಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.