ಕಲಘಟಗಿ: ತಾಲ್ಲೂಕಿನ ಬಮ್ಮಿಗಟ್ಟಿ ಗ್ರಾಮದ ಕೆಪಿಎಸ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ವಿದ್ಯಾರ್ಥಿಗಳು ಬಾಲ- ರಾಧೆ–ಕೃಷ್ಣ ವೇಷಭೂಷಣದಲ್ಲಿ ಮಿಂಚಿದರು.
ಮುಸ್ಲಿಮರೂ ತಮ್ಮ ಮಕ್ಕಳಿಗೆ ಕೃಷ್ಣ, ರಾಧೆ ವೇಷ ತೊಡಿಸಿ ಭಾವೈಕ್ಯ ಮೆರೆದರು.
ಮುದ್ದು ಮಕ್ಕಳು ರಾಧಾ- ಕೃಷ್ಣರಂತೆ ಕಂಡು ಬಂದರು. ಮಕ್ಕಳನ್ನು ನೋಡಿ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪಾಲಕರು ಪೋಷಕರು, ಪೂರ್ವ ಪ್ರಾಥಮಿಕ ಶಾಲೆಯ ಶಿಕ್ಷಕಿಯರಾದ ನೀಲಮ್ಮ ಜವಳಿ, ಉಮಾ ಪಾಟೀಲ, ಶಾಲೆಯ ಗುರುವೃಂದ, ಎಸ್ಡಿಎಂಸಿ ಪದಾಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.