ADVERTISEMENT

ಗೋವು ರಾಷ್ಟ್ರ ಪ್ರಾಣಿಯಾಗಲಿ: ಆರ್‌ಎಸ್‌ಎಸ್‌

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2020, 7:38 IST
Last Updated 10 ಡಿಸೆಂಬರ್ 2020, 7:38 IST
   

ಹುಬ್ಬಳ್ಳಿ: ಹುಲಿಯ ಬದಲಾಗಿ ಗೋವು ರಾಷ್ಟ್ರ ಪ್ರಾಣಿಯಾಗಲಿ ಎಂದು ಆರ್‌ಎಸ್‌ಎಸ್‌ ಹಿರಿಯ ಪ್ರಚಾರಕ ಸು ರಾಮಣ್ಣ ಹೇಳಿದರು.
ಗೋ ಪೂಜೆ ನೆರವೇರಿಸಿ ಮಾತನಾಡಿದ ಅವರು, ಗೋವು ಇತರರಿಗಾಗಿಯೇ ಜೀವನ ಸವೆಸುತ್ತದೆ. ಆದ್ದರಿಂದ ಅದನ್ನು ರಾಷ್ಟ್ರ ಪ್ರಾಣಿಯಾಗಿಸಬೇಕು ಎಂದರು.

ಗೋ ಹತ್ಯೆ ಬಂದ್ ಮಾಡಬೇಕು ಎಂದು ಮಹಾತ್ಮ ಗಾಂಧಿ ಹೇಳಿದ್ದರು. ಈಗ ಅದನ್ನು ಪೂರ್ಣಗೊಳಿಸಿದ್ದೇವೆ. ಕಾನೂನಿಗೆ ಅವರೇ ಪ್ರೇರಣೆ ಎಂದು ಹೇಳಿದರು.

ಬೇರೆಯವರ ಕುಮ್ಮಕ್ಕಿನಿಂದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ, ರಾಜಸ್ಥಾನದಲ್ಲಿ ಬಿಜೆಪಿ ಯನ್ನು ರೈತರು ಬೆಂಬಲಿಸಿದ್ದಾರೆ ಎಂಬುದನ್ನು ಗಮನಿಸಬೇಕು ಎಂದರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.