ಹುಬ್ಬಳ್ಳಿ: ಜಗತ್ತಿನಲ್ಲಿರುವ ಎಲ್ಲ ಧರ್ಮಗಳು ಶ್ರೇಷ್ಠವಾಗಿದ್ದು, ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮ ಸರ್ವಶ್ರೇಷ್ಠವಾಗಿದೆ. ಲಿಂಗಾಯತರು ಅರಿವು, ಆಚಾರಗಳ ಬಗ್ಗೆ ಗಹನವಾಗಿ ತಿಳಿದುಕೊಂಡರೆ ಆಚರಣೆಗಳ ಬಗ್ಗೆ ಶಕ್ತಿ ಬರುತ್ತದೆ ಎಂದು ಮೂರುಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಮಹಾಶಿವರಾತ್ರಿ ಅಂಗವಾಗಿ ಶಿವಯೋಗ, ಸಾಮೂಹಿಕ ಇಷ್ಟಲಿಂಗ ಪೂಜೆ ಮತ್ತು ಯೋಗ ಕಾರ್ಯಕ್ರಮದಲ್ಲಿ ಮಾತನಾಡಿದರು.
’ಲಯ ಯೋಗ, ಹಠ ಯೋಗ, ಮಂತ್ರ ಯೋಗ ಮುಂತಾದ ಯೋಗಗಳಿಗೆ ಶಿವಯೋಗ ರಾಜಯೋಗವಾಗಿದೆ. ಶಿವಯೋಗ ಅತ್ಯಂತ ಸರಳ, ಉಪಯುಕ್ತ ಯೋಗವಾಗಿದೆ’ ಎಂದರು.
ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಧಾರ್ಮಿಕ ಕೋಶ ಅಧ್ಯಕ್ಷ ಪ್ರೊ ಜಿ.ಬಿ.ಹಳ್ಳಾಳ, ಜಿಲ್ಲಾ ಘಟಕದ ಅಧ್ಯಕ್ಷ ಎಂ.ವಿ.ಗೊಂಗಡಶೆಟ್ಟಿ, ಪ್ರಧಾನ ಕಾರ್ಯದರ್ಶಿ ಬಿ.ಎಲ್.ಲಿಂಗಶೆಟ್ಟರ, ಕೋಶಾಧ್ಯಕ್ಷ ಎಸ್.ವಿ.ಕೊಟಗಿ, ಬಸವ ಕೇಂದ್ರದ ಅಧ್ಯಕ್ಷ ಬಿ.ವಿ.ಶಿರೂರ, ಗ್ರಂಥಪಾಲಕ ಸುರೇಶ ಡಿ. ಹೊರಕೇರಿ, ಪ್ರೊ ಎಸ್.ವಿ ಪಟ್ಟಣಶೆಟ್ಟಿ, ಉದ್ಯಮಿ ಶಂಕರ ಕೋಳಿವಾಡ, ತಾರಾದೇವಿ ವಾಲಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.