ADVERTISEMENT

ಧಾರವಾಡ: ಮರಾಠ ಸಮುದಾಯ ಭವನ ಉದ್ಘಾಟನೆ ಮೇ 24ರಂದು

​ಪ್ರಜಾವಾಣಿ ವಾರ್ತೆ
Published 21 ಮೇ 2025, 14:20 IST
Last Updated 21 ಮೇ 2025, 14:20 IST
ಪ್ರತಾಪ ಚವಾಣ್
ಪ್ರತಾಪ ಚವಾಣ್   

ಧಾರವಾಡ: ನಗರದ ದೊಡ್ಡನಾಯಕನಕೊಪ್ಪದಲ್ಲಿ ನಿರ್ಮಿಸಿದ ಮರಾಠ ಸಮುದಾಯ ಭವನದ ಉದ್ಘಾಟನಾ ಸಮಾರಂಭ ಮೇ 24ರಂದು ನಡೆಯಲಿದೆ ಎಂದು ಮರಾಠ ಸಮಾಜ ಸಂಘಟನೆ ಅಧ್ಯಕ್ಷ ಪ್ರತಾಪ ಅರ್ಜುನರಾವ್ ಚವಾಣ್ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ಮಾಜಿ ಶಾಸಕ ಡಿ.ಆರ್.ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು. ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ಸಮುದಾಯ ಭವನ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಭೋಜನಾಲಯ ಉದ್ಘಾಟಿಸುವರು ಎಂದರು.

ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ನಾಮಫಲಕ ಅನಾವರಣಗೊಳಿಸುವರು ಎಂದು ಹೇಳಿದರು.

ADVERTISEMENT

ಮರಾಠ ಸಮಾಜದ ಯುವ ವೇದಿಕೆ ಉಪಾಧ್ಯಕ್ಷ ಪಾಪು ಧಾರೆ ಮಾತನಾಡಿ, ಮರಾಠಾ ಸಮುದಾಯ ಭವನವನ್ನು ಉದ್ಯೋಗ ಮೇಳ, ಸ್ಪರ್ಧಾ ಪರೀಕ್ಷೆ ತರಬೇತಿ ಸೇರಿದಂತೆ ಸಮಾಜದ ಸಂಘಟನಾ ಕಾರ್ಯಕ್ರಮಗಳಿಗೆ ಸದ್ಬಳಕೆ ಮಾಡಿಕೊಳ್ಳಲಾಗುವುದು ಎಂದರು.

ಚಂದ್ರಶೇಖರ ಪವಾರ, ಸಹದೇವ ಮಾನೆ, ಮಾತೇಶ ಜಾಧವ, ಉದಯ ಕಾಳೆ, ಮಾರ್ತಾಂಡಪ್ಪ ಜಾಧವ, ಅರುಣ, ವಸಂತ ಕುಂಟೆ ಸುದ್ದಿಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.