ADVERTISEMENT

ಕಾರ್ಮಿಕರಿಗೆ ನ್ಯಾಯ ಕೊಡಿಸಲು ಕ್ರಮ: ಸಚಿವ ಲಾಡ್‌

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 4:43 IST
Last Updated 20 ನವೆಂಬರ್ 2025, 4:43 IST
<div class="paragraphs"><p>ಸಂತೋಷ ಲಾಡ್‌</p></div>

ಸಂತೋಷ ಲಾಡ್‌

   

ಧಾರವಾಡ: ‘ನಗರದ ಬೇಲೂರು ಕೈಗಾರಿಕಾ ವಲಯದಲ್ಲಿನ ಗಾಲಾ ಕಂಪನಿಯನ್ನು ಏಕಾಏಕಿಯಾಗಿ ಮುಚ್ಚಿರುವ ಕುರಿತು ಸಂಬಂಧಪಟ್ಟರೊಂದಿಗೆ ಸಭೆ ನಡೆಸಿ ಕಾರ್ಮಿಕರಿಗೆ ನ್ಯಾಯ ಒದಗಿಸಲು ಕ್ರಮ ವಹಿಸುವುದಾಗಿಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರು ಕಂಪನಿ ಕಾರ್ಮಿಕರಿಗೆ ತಿಳಿಸಿದ್ದಾರೆ.

‘ಕಂಪನಿಗೆ ಸಂಬಂಧಿಸಿದ ವಿವರ ನೀಡುವಂತೆ ಕಾರ್ಮಿಕ ಇಲಾಖೆ ಸಹಾಯಕ ಆಯಕ್ತರಿಗೆ ಸೂಚನೆ ನೀಡಲಾಗಿದೆ. ಮುಂದಿನ ವಾರ ಬೆಂಗಳೂರಿನಲ್ಲಿ ಸಂಬಂಧಪಟ್ಟವರ ಜತೆ ಸಭೆ ನಡೆಸಲಾಗುವುದು ಎಂದು ಸಚಿವ ಲಾಡ್‌ ತಿಳಿಸಿದರು’ ಎಂದು ಗಾಲಾ ಕಾರ್ಖಾನೆ ನೌಕರ ಮಂಜುನಾಥ ’ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಗಾಲಾ ಕಾರ್ಖಾಯಲ್ಲಿ 120 ನೌಕರರು ಕಾರ್ಯನಿರ್ವಹಿಸುತ್ತಿದ್ದೆವು. ಅ.27ರಂದು ಏಕಾಏಕಿಯಾಗಿ ಕಂಪನಿ ಬಂದ್‌ ಮಾಡಿದ್ದಾರೆ. ಕಾರ್ಮಿಕರು ಸಂಕಷ್ಟಕ್ಕೀಡಾಗಿದ್ದೇವೆ. ಸರ್ಕಾರ ಮಧ್ಯ ಪ್ರವೇಶಿಸಿ ಕಾರ್ಮಿಕರಿಗೆ ನ್ಯಾಯ ಕೊಡಿಸಬೇಕು ಎಂದು ಸಚಿವರಿಗೆ ಮನವಿ ಮಾಡಿದ್ದೇವೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.