ADVERTISEMENT

ಮುನೇನಕೊಪ್ಪ ಚೇತರಿಕೆಗೆ ಪ್ರಾರ್ಥನೆ: ಮಂಡಿಯಲ್ಲಿ ಮೆಟ್ಟಿಲೇರಿದ ಅಭಿಮಾನಿಗಳು

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2020, 15:14 IST
Last Updated 1 ಅಕ್ಟೋಬರ್ 2020, 15:14 IST
ಕೋವಿಡ್ ಧೃಡಪಟ್ಟಿರುವ ಶಾಸಕ ಶಂಕರಪಾಟೀಲ ಮುನೇನಕೊಪ್ಪ ಶೀಘ್ರ ಗುಣಮುಖರಾಗಲಿ ಎಂದು, ಅವರ ಅಭಿಮಾನಿಗಳು ಶಿರಡಿನಗರದಲ್ಲಿರುವ ಸಾಯಿಬಾಬಾ ಮಂದಿರವನ್ನು ಮಂಡಿಗಾಲಿನಲ್ಲಿ ಏರಿದರು
ಕೋವಿಡ್ ಧೃಡಪಟ್ಟಿರುವ ಶಾಸಕ ಶಂಕರಪಾಟೀಲ ಮುನೇನಕೊಪ್ಪ ಶೀಘ್ರ ಗುಣಮುಖರಾಗಲಿ ಎಂದು, ಅವರ ಅಭಿಮಾನಿಗಳು ಶಿರಡಿನಗರದಲ್ಲಿರುವ ಸಾಯಿಬಾಬಾ ಮಂದಿರವನ್ನು ಮಂಡಿಗಾಲಿನಲ್ಲಿ ಏರಿದರು   

ಹುಬ್ಬಳ್ಳಿ: ಕೋವಿಡ್ –19 ದೃಢಪಟ್ಟಿರುವ ನವಲಗುಂದ ಶಾಸಕ ಶಂಕರಪಾಟೀಲ ಮುನೇನಕೊಪ್ಪ ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿ, ಅವರ ಅಭಿಮಾನಿಗಳು ಗುರುವಾರ ನಗರದ ಶಿರಡಿನಗರದಲ್ಲಿರುವ ಸಾಯಿಬಾಬಾ ಮಂದಿರದ ಮೆಟ್ಟಿಲುಗಳನ್ನು ಮಂಡಿಗಾಲಿನಲ್ಲಿ ಏರಿದರು.

ಅಭಿಮಾನಿಗಳಾದಮಂಜುನಾಥ ಹೆಬಸೂರ, ವಿಜಯಕಾಂತ ನಿಡವಣಿ, ಶಂಕರಗೌಡ ಪಾಟೀಲ, ಸಂತೋಷ ಹಿರೇಮಠ, ಅಣ್ಣಪ್ಪ, ದ್ಯಾಮಣಗೌಡ, ಕಿರಣ ಮಂಡಿಯಲ್ಲೇ ಮೆಟ್ಟಿಲುಗಳನ್ನು ಏರಿದರು. ಬಳಿಕ ಬಾಬಾಗೆ ವಿಶೇಷ ಪೂಜೆ ಸಲ್ಲಿಸಿ, ತಮ್ಮ ನೆಚ್ಚಿನ ನಾಯಕ ಕೋವಿಡ್‌ನಿಂದ ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದರು.

ಮುನೇನಕೊಪ್ಪ ಅವರಿಗೆ ಸೆ. 30ರಂದು ಕೊರೊನಾ ಸೋಂಕು ದೃಢಪಟ್ಟಿತ್ತು. ಈ ಕುರಿತು ಅವರು, ಟ್ವೀಟ್ ಮಾಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.