ಹುಬ್ಬಳ್ಳಿ: ಮಠದ ಆಸ್ತಿ ವಿಚಾರದಲ್ಲಿ ನಾವಂತೂ ಪ್ರಾಮಾಣಿಕವಾಗಿ ಇದ್ದೇವೆ. ಆದರೂ ಸಮಾಜದಲ್ಲಿ ಕೆಲವರ ಅಪ ಪ್ರಚಾರ ಇರುತ್ತದೆ, ಆ ಬಗ್ಗೆ ಜನರೇ ಸತ್ಯಾ ಸತ್ಯತೆ ಅರಿಯಲಿ ಎಂದು ಹುಬ್ಬಳ್ಳಿ ಮೂರು ಸಾವಿರ ಮಠದ ಗುರುಸಿದ್ಧ ರಾಜ ಯೋಗಿಂದ್ರ ಸ್ವಾಮೀಜಿ ಹೇಳಿದರು.
ಜಾಗತಿಕ ಲಿಂಗಾಯತ ಮಹಾಸಭಾದ 'ಚಿಂತನೆ- ಸಂಘಟನೆ' ಗೋಷ್ಠಿಯಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.
ಮಠ ಸಮಾಜದ ಆಸ್ತಿ ಎಂದು ಹೇಳಿದ ಅವರು, ನಾವೆಷ್ಟೇ ಪ್ರಾಮಾಣಿಕವಾಗಿ ಇದ್ದರೂ ಸಮಾಜದಲ್ಲಿ ಗೊಂದಲ ಸೃಷ್ಟಿಸಲು ಇಂತಹ ಆರೋಪ ಕೇಳಿ ಬರುತ್ತಲೇ ಇರುತ್ತದೆ, ಆದಾಗ್ಯೂ ನಾವು ಇವತ್ತು, ಮುಂದೆಯೂ ಪ್ರಾಮಾಣಿಕವಾಗಿಯೇ ಇರುತ್ತೇವೆ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.