ADVERTISEMENT

ಕಲಘಟಗಿ: ಬೇಗೂರ ಗ್ರಾ.ಪಂ: ನಾಗವ್ವ ಅಧ್ಯಕ್ಷೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2022, 3:58 IST
Last Updated 9 ಫೆಬ್ರುವರಿ 2022, 3:58 IST
ಕಲಘಟಗಿ ತಾಲ್ಲೂಕಿನ ಬೇಗೂರ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದ ನಾಗವ್ವ ಜಂಬೂಲಿಂಗ ಅಂಗಡಿ ಮತ್ತು ಬಸವರಾಜ ಅಶೋಕ ಮಿಕ್ಕಿತ ಅವರನ್ನು ಬೆಂಬಲಿಗರು ಸನ್ಮಾನಿಸಿದರು
ಕಲಘಟಗಿ ತಾಲ್ಲೂಕಿನ ಬೇಗೂರ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದ ನಾಗವ್ವ ಜಂಬೂಲಿಂಗ ಅಂಗಡಿ ಮತ್ತು ಬಸವರಾಜ ಅಶೋಕ ಮಿಕ್ಕಿತ ಅವರನ್ನು ಬೆಂಬಲಿಗರು ಸನ್ಮಾನಿಸಿದರು   

ಕಲಘಟಗಿ: ತಾಲ್ಲೂಕಿನ ಬೇಗೂರ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ತುಮರಿಕೊಪ್ಪ ಗ್ರಾಮದ ನಾಗವ್ವ ಜಂಬೂಲಿಂಗ ಅಂಗಡಿ ಅವಿರೋಧ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಬಸವರಾಜ ಅಶೋಕ ಮಿಕ್ಕಿತ ಹಾಗೂ ನಿಂಗಪ್ಪ ಇವರ ನಡುವೆ ಸ್ಪರ್ಧೆ ಇತ್ತು. ಬಸವರಾಜ 16 ಮತ ‍ಪಡೆದು ಆಯ್ಕೆಯಾದರು. ನಿಂಗಪ್ಪ ಅವರು 3 ಮತ ಪಡೆದರು.

ಇತ್ತೀಚೆಗೆ ಜರುಗಿದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ 19 ಸದಸ್ಯರು ನೂತನವಾಗಿ ಆಯ್ಕೆಯಾಗಿದ್ದರು. ಚುನಾವಣಾ ಅಧಿಕಾರಿಯಾಗಿ ತಾಲ್ಲೂಕು ಪಂಚಾಯತಿ ಇಒ ಎಸ್.ಎಂ. ಮಠಪತಿ, ಸಹಾಯಕ ಚುನಾವಣಾ ಅಧಿಕಾರಿ ರವೀಂದ್ರ ಅಲ್ಲಾಪುರ, ಪಿಡಿಒ ಎಸ್. ಎಫ್ ಗೌಳೇರ, ಕಂಪ್ಯೂಟರ್ ಆಪರೇಟರ್ ಪ್ರಭು ಅಂಗಡಿ ಚುನಾವಣಾ ಕಾರ್ಯನಿರ್ವಹಿಸಿದರು. ಗ್ರಾಮ ಪಂಚಾಯತಿ ಸರ್ವ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT