ADVERTISEMENT

ಅಂಜುಮನ್ ಮಹಾವಿದ್ಯಾಲಯದಲ್ಲಿ ಪತ್ರಿಕಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2023, 16:29 IST
Last Updated 16 ನವೆಂಬರ್ 2023, 16:29 IST

ಧಾರವಾಡ: ಪತ್ರಿಕಾ ದಿನಾಚರಣೆ ಪ್ರಯುಕ್ತ ಅಂಜುಮನ್ ಪದವಿ ಮಹಾವಿದ್ಯಾಲಯದಲ್ಲಿ ಗುರುವಾರ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಪತ್ರಕರ್ತ ಮಲ್ಲಿಕಾರ್ಜುನ ಸಿದ್ದನಣ್ಣವರ ಮಾತನಾಡಿ, ‘ಪತ್ರಿಕೋದ್ಯಮದ ಮೌಲ್ಯಗಳನ್ನು ಪ್ರತಿಯೊಬ್ಬರೂ ಅರಿಯಬೇಕು, ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ನವ ಮಾದ್ಯಮಗಳು ಬಹಳಷ್ಟು ವೇಗವಾಗಿ ಸುದ್ದಿ ಜನರಿಗೆ ತಲುಪಿಸುತ್ತವೆ. ಆದರೆ, ಪತ್ರಿಕೆಗಳು ಪೈಪೋಟಿ ಮಧ್ಯೆ ನೈಜತೆ ಪ್ರತಿಪಾದಿಸುತ್ತಿವೆ’ ಎಂದರು.

ಪತ್ರಕರ್ತ ಜಾವೇದ್ ಅಧೋನಿ ಮಾತನಾಡಿ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸವಾಲುಗಳು ಹಲವು ಇವೆ.ಎಲ್ಲವನ್ನೂ ಧನಾತ್ಮಕವಾಗಿ ಪರಿಗಣಿಸಬೇಕು. ಜನರ ಬಗ್ಗೆ ಕಾಳಜಿ ಹೊಂದಿರಬೇಕು’ ಎಂದರು.

ADVERTISEMENT

ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎನ್ ಎಮ್ ಮಕಾಂದಾರ, ಐಕ್ಯೂಎಸಿ ಸಂಯೋಜಕ ಏನ್.ಬಿ. ನಾಲತವಾಡ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಎಸ್.ಎಸ್ ಅಧೋನಿ, ಉಪನ್ಯಾಸಕರಾದ ರೇಷ್ಮಾ ದೇಸಾಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.