ADVERTISEMENT

ವಾಣಿಜ್ಯನಗರಿಗೆ ಮಳೆಯ ಸಿಂಚನ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2019, 14:52 IST
Last Updated 14 ಅಕ್ಟೋಬರ್ 2019, 14:52 IST
ಹುಬ್ಬಳ್ಳಿಯಲ್ಲಿ ಸೋಮವಾರ ದಿಢೀರ್ ಮಳೆ ಸುರಿದಿದ್ದರಿಂದ ಮಹಿಳೆಯರು ಮಳೆಯಲ್ಲಿ ನೆನೆದುಕೊಂಡು ರಸ್ತೆ ದಾಟಿದರು
ಹುಬ್ಬಳ್ಳಿಯಲ್ಲಿ ಸೋಮವಾರ ದಿಢೀರ್ ಮಳೆ ಸುರಿದಿದ್ದರಿಂದ ಮಹಿಳೆಯರು ಮಳೆಯಲ್ಲಿ ನೆನೆದುಕೊಂಡು ರಸ್ತೆ ದಾಟಿದರು   

ಹುಬ್ಬಳ್ಳಿ: ಬೆಳಿಗ್ಗೆಯಿಂದ ಬಿಸಿಲ ಧಗೆಯಿಂದ ಬಸವಳಿದ್ದಿದ ವಾಣಿಜ್ಯನಗರಿ ಹುಬ್ಬಳ್ಳಿಗೆ, ಸೋಮವಾರ ಸಂಜೆ ಮಳೆರಾಯ ತಂಪನ್ನೆರೆದ. ವರುಣನ ದಿಢೀರ್ ಆಗಮನದಿಂದ ಪ್ರಯಾಣಿಕರು ವಿಧಿ ಇಲ್ಲದೆ ನೆನೆಯಬೇಕಾಯಿತು.

ಸಂಜೆಯ 5.15ರ ಹೊತ್ತಿಗೆ ಆರಂಭವಾದ ಮಳೆ 25 ನಿಮಿಷ ಸುರಿಯಿತು. ಹೊಸೂರು ವೃತ್ತ, ಚನ್ನಮ್ಮನ ವೃತ್ತ, ಕಾಟನ್ ಮಾರ್ಕೆಟ್, ವಿದ್ಯಾನಗರ, ದೇಶಪಾಂಡೆ ನಗರ, ದುರ್ಗದ ಬೈಲ್, ಮೇದಾರ ಓಣಿ ಸೇರಿದಂತೆ ಕೆಲವೆಡೆ ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಯಿತು. ಎಂದಿನಂತೆ ಬಿಆರ್‌ಟಿಎಸ್‌ ರಸ್ತೆ ತಗ್ಗು ಪ್ರದೇಶಗಳಲ್ಲಿ ಹಳ್ಳವಾಗಿ ಮಾರ್ಪಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT