ಹುಬ್ಬಳ್ಳಿ: ಇಲ್ಲಿನ ದೇಶಪಾಂಡೆ ನಗರದ ಬಳಿ ನಿರ್ಮಾಣವಾಗುತ್ತಿರುವ ರೈಲ್ವೆ ಸೇತುವೆ ನಿರ್ಮಾಣ ವೀಕ್ಷಣೆಗೆ ಸಚಿವ ಜಗದೀಶ ಶೆಟ್ಟರ್ ತೆರಳಿದ್ದ ವೇಳೆ ಮಣ್ಣು ಕುಸಿತದಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಶೆಟ್ಟರ್ ಅವರು ಸೇತುವೆ ಕೆಳಗಡೆ ಹೋದಾಗ ಜೆಸಿಬಿ ಕೆಲಸ ಮುಂದುವರಿಸಿದ್ದರಿಂದ ಮೇಲಿನ ಮಣ್ಣು ಕುಸಿಯಿತು. ಭಾರೀ ದೂಳು ಎದ್ದಿದ್ದರಿಂದ ಗೊಂದಲ ಉಂಟಾಯಿತು.
ಫೋಟೊ ತೆಗೆಯಲು ನಿಂತಿದ್ದ ಫೋಟೊ ಗ್ರಾಫರ್ ಗಳನ್ನು ಬದಿಗೆ ಸರಿಸಲಾಯಿತು. ಯಾರಿಗೂ ಯಾವುದೇ ರೀತಿಯ ಅಪಾಯವಾಗಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.