ಹುಬ್ಬಳ್ಳಿ: ಡಾ. ಬಸು ಬೇವಿನಗಿಡದ ಅಭಿನಂದನೆ ಹಾಗೂ ‘ತೊಟ್ಟುಕ್ರಾಂತಿ’ ಕಥೆಗಳು ಅವಲೋಕನ ಕಾರ್ಯಕ್ರಮ ಆ. 4ರಂದು ಬೆಳಿಗ್ಗೆ 10:15ಕ್ಕೆ ಇಲ್ಲಿನ ಕಾಳಿದಾಸ ನಗರದ ನಾಗಸುಧೆ ಜಗಲಿಯಲ್ಲಿ ನಡೆಯಲಿದೆ.
ಅಕ್ಷರ ಸಾಹಿತ್ಯ ವೇದಿಕೆ ಹಾಗೂ ನಾಗಸುಧೆ ಜಗಲಿ ವತಿಯಿಂದ ಈ ಕಾರ್ಯಕ್ರಮ ನಡೆಯಲಿದ್ದು, ಡಾ.ಬಸು ಬೇವಿನಗಿಡದ ಸಾಹಿತ್ಯ ಕುರಿತು ಚನ್ನಪ್ಪ ಅಂಗಡಿ ಹಾಗೂ ಸಿ.ಎಂ. ಮುನಿಸ್ವಾಮಿ ಮಾತನಾಡುವರು.
ಸಾಹಿತಿಗಳಾದ ಡಾ.ಬಸು ಬೇವಿನಗಿಡದ, ಕಾವ್ಯಾ ಕಡಮೆ ಪಾಲ್ಗೊಳ್ಳಲಿದ್ದು ಎಂ.ಬಿ. ಅಡ್ನೂರ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.