ADVERTISEMENT

ಮನೆ ಇಂಟರ್​ಲಾಕ್​ ಮುರಿದು ಕಳ್ಳತನ

​ಪ್ರಜಾವಾಣಿ ವಾರ್ತೆ
Published 23 ಜೂನ್ 2022, 2:57 IST
Last Updated 23 ಜೂನ್ 2022, 2:57 IST

ಹುಬ್ಬಳ್ಳಿ: ಇಲ್ಲಿನ ಶಿರೂರ ಪಾರ್ಕ್‌ನ ಗಜಾನನ ಹೆಗಡೆ ಎಂಬುವರ ಮನೆಯ ಇಂಟರ್‌ಲಾಕ್‌ ಮುರಿದು ಕಳ್ಳರು ₹ 1.44 ಲಕ್ಷ ಹಾಗೂ 68 ಗ್ರಾಂ ಚಿನ್ನಾಭರಣ, 500 ಗ್ರಾಂ ಬೆಳ್ಳಿ ಕದ್ದಿರುವ ಘಟನೆ ನಡೆದಿದೆ.

ಚಿಕಿತ್ಸೆಗೆ ಕುಟುಂಬದವರು ಹೊರ ಊರಿಗೆ ತೆರಳಿದ ಸಂದರ್ಭದಲ್ಲಿ ಕಳ್ಳತನ ನಡೆದಿದೆ.ಜೂನ್‌ 18ರಿಂದ 20ರ ನಡುವೆ ಕಳ್ಳತನ ನಡೆದಿದೆ ಎನ್ನಲಾಗಿದೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂಜಾಟ: ಇಲ್ಲಿನ ಮಂಟೂರ ರಸ್ತೆ ಕೆಇಬಿ ವೃತ್ತದ ಬಳಿ ಜೂಜಾಡುತ್ತಿದ್ದ ಇಬ್ಬರನ್ನು ಬೆಂಡಿಗೇರಿ ಠಾಣೆ ಪೊಲೀಸರು ಬಂಧಿಸಿದ್ದು, ಬಂಧಿತರಿಂದ ₹3,200 ನಗದು ವಶಪಡಿಸಿಕೊಳ್ಳಲಾಗಿದೆ.

ADVERTISEMENT

ಅಪಘಾತ ಸಾವು: ಇಲ್ಲಿನ ವರೂರ ಗ್ರಾಮದ ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದಾಗ ಕಾರು ಢಿಕ್ಕಿ ಹೊಡೆದಿದ್ದರಿಂದ ರಾಜಸ್ಥಾನ ಮೂಲದ, ಸದ್ಯ ಹುಬ್ಬಳ್ಳಿಯ ಅರಳಿಕಟ್ಟಿ ಓಣಿ ನಿವಾಸಿ ಗಜೇಂದ್ರಸಿಂಗ್ ದೇವರಾ (38) ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಸಂಭವಿಸಿದೆ. ಹುಬ್ಬಳ್ಳಿ ರೇಣುಕಾ ನಗರ ನಿವಾಸಿ ಡಾ.ಆನಂದ ತೀರ್ಥ ಮಠದ ಎಂಬವರು ಶಿಗ್ಗಾವಿಯಿಂದ ಹುಬ್ಬಳ್ಳಿ ಕಡೆಗೆ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್‌ ಕಳ್ಳತನ: ಗಣೇಶಪೇಟೆಯ ಬಾಕಳೆಗಲ್ಲಿ ತರಕಾರಿ ಮಾರುಕಟ್ಟೆ ಸಮೀಪ ಜ್ಯೋತಿ ನಗರದ ನಿವಾಸಿ ಮರಿನಾ ಪಿ. ಎಂಬುವರಿಗೆ ಸೇರಿದ ದ್ವಿಚಕ್ರ ವಾಹನ ಕಳುವಾಗಿದೆ. ಮಾರುಕಟ್ಟೆಗೆ ಹೋದಾಗ ವಾಹನ ಕಳುವಾಗಿದೆ. ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.