ಹುಬ್ಬಳ್ಳಿ: ಬೆಳಗಾವಿ ಜಿಲ್ಲೆ ರಾಯಬಾಗ ತಾಲ್ಲೂಕಿನ ಚಿಂಚಲಿ ಗ್ರಾಮದ ಮಾಯಕ್ಕದೇವಿ ಜಾತ್ರೆ ಅಂಗವಾಗಿ ಭಕ್ತರ ಅನುಕೂಲಕ್ಕಾಗಿ ಚಿಂಚಲಿ ರೈಲು ನಿಲ್ದಾಣದಲ್ಲಿ ಎಂಟು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ ಒದಗಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ.
ದಾದರ್- ತಿರುನೆಲ್ವೇಲಿ (11021), ತಿರುನೆಲ್ವೇಲಿ- ದಾದರ್ (11022), ದಾದರ್- ಪುದುಚೇರಿ (11005), ಪುದುಚೇರಿ- ದಾದರ್ (11006), ದಾದರ್- ಮೈಸೂರು (11035), ಮೈಸೂರು-ದಾದರ್ (11036) ತ್ರೀ ವೀಕ್ಲಿ ಎಕ್ಸ್ಪ್ರೆಸ್ ರೈಲುಗಳು, ತಿರುಪತಿ- ಕೊಲ್ಹಾಪುರ ಡೈಲಿ ಎಕ್ಸ್ ಪ್ರೆಸ್ (17415) ರೈಲು ಫೆ.11ರಿಂದ 22ರವರೆಗೆ ಹಾಗೂ ಕೊಲ್ಹಾಪುರ- ತಿರುಪತಿ ಡೈಲಿ ಎಕ್ಸ್ಪ್ರೆಸ್ (17416) ರೈಲುಗಳಿಗೆ ಫೆ.12ರಿಂದ ಫೆ.23ರವರೆಗೆ ಚಿಂಚಲಿ ರೈಲು ನಿಲ್ದಾಣದಲ್ಲಿ ತಾತ್ಕಾಲಿಕ ನಿಲುಗಡೆ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.