ಹುಬ್ಬಳ್ಳಿ: ಸಾರಿಗೆ ನೌಕರರು ಶುಕ್ರವಾರ ದಿಢೀರ್ ಆಗಿ ಆರಂಭಿಸಿದ ಮುಷ್ಕರ ಶನಿವಾರವೂ ಮುಂದುವರಿದಿದೆ. ಹೀಗಾಗಿ ವಾಣಿಜ್ಯ ನಗರಿಯಲ್ಲಿ ಬಸ್ಗಳು ರಸ್ತೆಗೆ ಇಳಿಯಲಿಲ್ಲ.
ಕಾಲೇಜು, ನೌಕರಿಗೆ ಹುಬ್ಬಳ್ಳಿ- ಧಾರವಾಡ ನಡುವೆ ಓಡಾಡುವವರು ಖಾಸಗಿ ಬಸ್ ಗಳನ್ನು ನೆಚ್ಚಿಕೊಂಡರು.ನಗರದ ಹಳೇ ಬಸ್ ನಿಲ್ದಾಣ, ಹೊಸೂರು ನಿಲ್ದಾಣ ಮತ್ತು ಗೋಕುಲ ರಸ್ತೆಯ ನಿಲ್ದಾಣಗಳ ಮುಂದೆ ಆಟೊ ಚಾಲಕರು ಕೂಡ ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ಮುಗಿಬಿದ್ದ ಚಿತ್ರಣ ಕಂಡುಬಂತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.