ಧಾರವಾಡ: ಜಿಲ್ಲೆಯಲ್ಲಿ ಮಂಗಳವಾರ ತಡರಾತ್ರಿ, ಬುಧವಾರ ಸುರಿದ ಮಳೆಗೆ ವಿವಿಧೆಡೆ 20 ಮನೆಗಳು ಭಾಗಶಃ ಹಾನಿಯಾಗಿದೆ. ತಾಲ್ಲೂಕು ಹುಬ್ಬಳ್ಳಿ 16, ಕುಂದಗೋಳ 3 ಹಾಗೂ ಧಾರವಾಡ 1 ಮನೆ ಹಾನಿಯಾಗಿದೆ.
ಜಿಲ್ಲೆಯ ವಿವಿಧೆಡೆ ಬುಧವಾರ ತುಂತುರು ಮಳೆಯಾಗಿದೆ. ಕೆಲ ದಿನಗಳ ಮಳೆಯಾಗುತ್ತಿದ್ದು ತಳ್ಳು ಗಾಡಿಗಳಲ್ಲಿ ವಸ್ತುಗಳ ಮಾರಾಟ, ಬೀದಿಬದಿ ವ್ಯಾಪಾರ ಪಡಿಪಟಲಾಗಿದೆ. ಅಳ್ನಾವರ 2.5, ಕಲಘಟಗಿ 2.2. ಧಾರವಾಡ 1.2, ಹುಬ್ಬಳ್ಳಿ ನಗರ 1 ಸೆಂ.ಮೀ ಮಳೆಯಾಗಿದೆ.
ಧಾರವಾಡ, ಕಲಘಟಗಿ, ಅಳ್ನಾವರ, ಕಲಘಟಗಿ, ನವಲಗುಂದ, ಕುಂದಗೋಳ ಹಾಗೂ, ಹುಬ್ಬಳ್ಳಿ ತಾಲ್ಲೂಕಿನ ಹಲವೆಡೆ ಅಧಿಕಾರಿಗಳು ಬೆಳೆ ಹಾನಿ ಪರಿಶೀಲನೆ ನಡೆಸಿದ್ದಾರೆ.
ಕೊಯ್ಲಿಗೆ ಬಂದಿದ್ದ ಹೆಸರು, ಉದ್ದು ಬೆಳೆ ಮಳೆಯಿಂದಾಗಿ ಹಾನಿಯಾಗುತ್ತಿದೆ. ಬೆಳೆ ವಿಮೆ ಮಾಡಿದ ರೈತರು ಅಗತ್ಯ ದಾಖಲೆಗಳೊಂದಿಗೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.