ಹುಬ್ಬಳ್ಳಿ: ವಾಸ್ಕೋಡಗಾಮ–ಎಂಜಿಆರ್ ಸೆಂಟ್ರಲ್ ಚೆನ್ನೈ ನಡುವೆ ವಾರಕ್ಕೆ ಒಂದು ದಿನ ವಿಶೇಷ ಎಕ್ಸ್ಪ್ರೆಸ್ ರೈಲಿನ ಸಂಚಾರವನ್ನು ಆ. 26ರಿಂದ ಸೆ. 9ರ ವರೆಗೆ ನಡೆಸಲಾಗುವುದು ಎಂದು ನೈರುತ್ಯ ರೈಲ್ವೆ ತಿಳಿಸಿದೆ. ಆ. 27ರಿಂದ ಸೆ. 10ರ ವರೆಗೆ ಚೆನ್ನೈನಿಂದ ವಾರಕ್ಕೊಂದು ಸಲ ರೈಲು ಸಂಚರಿಸಲಿದೆ.
ಈ ರೈಲು ವಾಸ್ಕೋಡಗಾಮದಿಂದ ಮಡಗಾಂವ್, ಕ್ಯಾಸೆಲ್ ರಾಕ್, ಲೋಂಡಾ, ಧಾರವಾಡ, ಹುಬ್ಬಳ್ಳಿ, ಹಾವೇರಿ, ರಾಣೆಬೆನ್ನೂರ, ಹರಿಹರ, ದಾವಣಗೆರೆ, ಬಿರೂರು, ಅರಸೀಕೆರೆ, ತಿಪಟೂರು, ತುಮಕೂರು, ಯಶವಂತಪುರ, ಬಾಣಸಬಾಡಿ, ಕೆ.ಆರ್. ಪುರಂ, ಬಂಗಾರಪೇಟೆ ಹಾಗೂ ಜೋಲಾರಪೇಟೆ ಮಾರ್ಗದಲ್ಲಿ ಸಂಚರಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.