ADVERTISEMENT

ಬಿಎಸ್‌ವೈಗೆ ರಾಜಕೀಯ ಶಕ್ತಿ ಇದೆ; ನಿವೃತ್ತಿ ಘೋಷಿಸಬಾರದು- ಡಿ.ಕೆ. ಶಿವಕುಮಾರ್

ಬಿ.ಎಸ್. ಯಡಿಯೂರಪ್ಪ ನಿವೃತ್ತಿ ಘೋಷಣೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2022, 12:24 IST
Last Updated 22 ಜುಲೈ 2022, 12:24 IST
   

ಹುಬ್ಬಳ್ಳಿ: ‘ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ನಿವೃತ್ತಿ ಘೋಷಿಸಬಾರದು. ಅವರಿಗೆ ಇನ್ನೂ ರಾಜಕೀಯ ಶಕ್ತಿ ಇದ್ದರೂ, ಅವರನ್ನು ಅಧಿಕಾರದಿಂದ ಕೆಳಕ್ಕಿಳಿಸಿದರು. ಅವರ ನಾಯಕತ್ವದಲ್ಲೇ ಪಕ್ಷ ಹೆಚ್ಚು ಸೀಟುಗಳನ್ನು ಗೆದ್ದಿತ್ತೇ ವಿನಾ ಮತ್ತೊಬ್ಬರ ಹೆಸರಿನಿಂದಲ್ಲ’ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಬಿಎಸ್‌ವೈ ನಿವೃತ್ತಿ ಕುರಿತು ನಗರದಲ್ಲಿ ಶುಕ್ರವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಯಡಿಯೂರಪ್ಪ ಅವರ ಹೆಸರಲ್ಲೇ ಆಪರೇಷನ್ ಕಮಲ‌ ಮಾಡಿ, ಬಿಜೆಪಿಯವರು ಅಧಿಕಾರ ಹಿಡಿದರು. ಕಡೆಗೆ ಅವರೇ ಕಣ್ಣೀರು ಹಾಕಿಕೊಂಡು ರಾಜಭವನಕ್ಕೆ ಹೋಗಿ, ರಾಜೀನಾಮೆ ಕೊಟ್ಟು ಬರುವಂತೆ ಮಾಡಿದರು’ ಎಂದರು.

‘ಯಡಿಯೂರಪ್ಪ ಅವರು ಎಷ್ಟೇ ನೊಂದರೂ ತಮ್ಮ‌ ಪಕ್ಷದ ಪರವಾಗಿ ಅಭಿಮಾನದಿಂದಲೇ ಮಾತನಾಡಿಕೊಂಡು ಬಂದಿದ್ದಾರೆ. ಪಕ್ಷದ ಸಿದ್ಧಾಂತದ ಮೇಲೆ ನಂಬಿಕೆ‌‌ ಇಟ್ಟು ಕೆಲಸ ಮಾಡಿದ್ದಾರೆ. ಅವರು ಅನುಭವಿಸುತ್ತಿರುವ ನೋವು ಮತ್ತು ಕಿರುಕುಳ ಅವರಿಗೇ ಗೊತ್ತು. ಮಾನಸಿಕವಾಗಿ ಅವರೀಗ ಕುಗ್ಗಿದ್ದಾರೆ‌. ಆದರೆ, ಬಿಜೆಪಿ ಮಾತ್ರ ಅವರನ್ನು ಎಷ್ಟು ಬೇಕೋ ಅಷ್ಟು ಬಳಸಿಕೊಂಡು ಬಿಸಾಕಿದೆ’ ಎಂದು ಮರುಕ ವ್ಯಕ್ತಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.