ಡಂಬಳ: ‘ಹೋಬಳಿ ವ್ಯಾಪ್ತಿಯಲ್ಲಿ ಮಾದಿಗ ಸಮುದಾಯಕ್ಕೆ ಸೇರಿದ 100ಕ್ಕೂ ಹೆಚ್ಚು ಕುಟುಂಬಗಳು ಒಂದೇ ಕಡೆ ವಾಸಿಸುತ್ತಿದ್ದು, ಇವರಿಗೆ ಪ್ರತ್ಯೇಕವಾಗಿ ಆಶ್ರಯ ಮನೆ ನಿರ್ಮಿಸಿಕೊಳ್ಳಲು, ಸರ್ಕಾರದ ವತಿಯಿಂದ 6 ಎಕರೆ ಜಮೀನು ಖರೀದಿಸಿ ಕೊಡುವಂತೆ ಸಮುದಾಯ ಪ್ರತಿನಿಧಿಗಳು ಮಂಗಳವಾರ ಶಾಸಕ ಜಿ.ಎಸ್ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
‘ಜೀವನೋಪಾಯಕ್ಕಾಗಿ ಕೂಲಿ, ಗೌಂಡಿ ಕೆಲಸವನ್ನು ಅಲಂಬಿಸಿದ್ದೇವೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದು, ಸದ್ಯ ವಾಸವಿರುವ ಸ್ಥಳದಲ್ಲಿ ಮನೆ ಕಟ್ಟಿಕೊಳ್ಳಲು ಸ್ಥಳದ ಕೊರತೆ ಇದೆ. ಹೀಗಾಗಿ, ಪ್ರತ್ಯೇಕವಾಗಿ ನಮ್ಮ ಸಮುದಾಯಕ್ಕೆ ಆಶ್ರಯ ಮನೆಗಳನ್ನು ಕಟ್ಟಿಕೊಡಬೇಕು ಎಂದು ಸಮುದಾಯದ ಮುಖಂಡ ಕೆ.ಎನ್. ದೊಡ್ಡಮನಿ ಮನವಿ ಮಾಡಿದರು.
ನಿಂಗಪ್ಪ ಹರಿಜನ ಅಶೋಕ ತಳಗೇರಿ ಮರಿಯಪ್ಪ ಸಿದ್ದಣ್ಣನವರ,ಮರಿಯಪ್ಪ ದೊಡ್ಡಮನಿ, ದೇವಿಂದ್ರಪ್ಪ ಗೌಡಣ್ಣನವರ, ದೇವಪ್ಪ ತಳಗೇರಿ, ಮುದಕಣ್ಣ ತಳಗೇರಿ, ಶಿವಲಿಂಗೇಶ ಬೇಟಗೇರಿ, ಮಾರುತಿ ವಗ್ಗರಣಿ, ಸುರೇಶ ರಾಮೆನಹಳ್ಳಿ, ನಾಗರಾಜ ಗೋವಿನಕೊಪ್ಪ, ದೇವಪ್ಪ ದೊಡ್ಡಮನಿ, ಬಸಪ್ಪ ವಗ್ಗರಣಿ, ಮುತ್ತಪ್ಪ ತಳಗೇರಿ ಇದ್ದರು.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.