ನರಗುಂದ: ‘ಮಹದಾಯಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ನಿರಂತರವಾಗಿ ನಡೆಯುತ್ತಿರುವ ಹೋರಾಟದಲ್ಲಿ ಮಹಿಳೆಯರು ಸಕ್ರಿಯವಾಗಿ ಭಾಗವಹಿಸ ಬೇಕು’ ಎಂದು ಮಹದಾಯಿ ಹೋರಾಟ ಸಮಿತಿ ಸದಸ್ಯ ರಾಯವ್ವ ಕಟಗಿ ಹೇಳಿದರು.
ಪಟ್ಟಣದಲ್ಲಿ ನಡೆಯುತ್ತಿರುವ ಮಹಾದಾಯಿ ಧರಣಿಯ 812ನೇ ದಿನ ಬುಧವಾರ ಅವರು ಮಾತನಾಡಿದರು.
‘ರಾಣಿ ಚನ್ನಮ್ಮ, ಒಣಕೆ ಓಬವ್ವ ಜನಿಸಿದ ನಾಡಿನಲ್ಲಿ ಮಹಿಳೆಯರು ತಮ್ಮ ಶಕ್ತಿ ತೋರಿಸಬೇಕಿದೆ. ಜನಪ್ರತಿನಿಧಿಗಳಿಗೆ ಬುದ್ಧಿ ಕಲಿಸಬೇಕಿದೆ ಎಂದರು.
ವೆಂಕಪ್ಪ ಹುಜರತ್ತಿ, ಎಸ್.ಬಿ. ಜೋಗಣ್ಣವರ, ಜಯಪಾಲ ಮುತ್ತಿನ, ವಿರೂಪಾಕ್ಷ ಪಾರಣ್ಣವರ ಧರಣಿಯಲ್ಲಿ ಧರಣಿಯಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.