ADVERTISEMENT

ಲಕ್ಷ್ಮೇಶ್ವರ: ದಿಂಡಿ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 6:45 IST
Last Updated 4 ಏಪ್ರಿಲ್ 2013, 6:45 IST

ಲಕ್ಷ್ಮೇಶ್ವರ: ಗುರು ಏಕನಾಥ ಮಹಾರಾಜರ ಷಷ್ಠಿ ನಿಮಿತ್ತ ಸ್ಥಳೀಯ ಪಾಂಡುರಂಗನ ದೇವಸ್ಥಾನದಲ್ಲಿ ಭಾವಸಾರ ಕ್ಷತ್ರಿಯ ಸಮಾಜ, ಸಂತ ಜ್ಞಾನೇಶ್ವರ ಯುವಕ ಮಂಡಳ ಹಾಗೂ ಹಿಂಗುಲಾಂಬಿಕಾ ಮಹಿಳಾ ಮಂಡಳ ಇವರ ಆಶ್ರಯದಲ್ಲಿ ಸೋಮವಾರ ಮತ್ತು ಮಂಗಳವಾರ ದಿಂಡಿ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. 

ಉತ್ಸವದ ಅಂಗವಾಗಿ ಪೋತಿ ಪ್ರತಿಷ್ಠಾಪನೆ, ಗುಲಾಲ ಕೀರ್ತನೆ, ಪ್ರವಚನ, ನಾಮಜಪ ಹಾಗೂ ಆಕಾಶವಾಣಿ ಕಲಾವಿದ ಶ್ರೀಕಾಂತ ಬಾಕಳೆ ಮತ್ತು ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT