ADVERTISEMENT

ಜ್ಞಾನದ ಜತೆಗೆ ಕೌಶಲ ಅವಶ್ಯ: ಮಹೇಶ ಭಟ್‌

​ಪ್ರಜಾವಾಣಿ ವಾರ್ತೆ
Published 24 ಮೇ 2025, 14:09 IST
Last Updated 24 ಮೇ 2025, 14:09 IST
ಗದಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ನಡೆದ ಜಿಲ್ಲಾ ಮಟ್ಟದ ಒಂದು ದಿನದ ಕಾರ್ಯಾಗಾರವನ್ನು ಮಹೇಶ ಭಟ್‌ ಉದ್ಘಾಟಿಸಿದರು
ಗದಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ನಡೆದ ಜಿಲ್ಲಾ ಮಟ್ಟದ ಒಂದು ದಿನದ ಕಾರ್ಯಾಗಾರವನ್ನು ಮಹೇಶ ಭಟ್‌ ಉದ್ಘಾಟಿಸಿದರು   

ಗದಗ: ‘ಯಾವುದೇ ಕ್ಷೇತ್ರದಲ್ಲಿ ಉದ್ಯೋಗ ಪಡೆಯುವಲ್ಲಿ ಜ್ಞಾನದ ಜತೆಗೆ ಕೌಶಲ ಮುಖ್ಯ’ ಎಂದು ಲಾಜಿಕ್‌ ಕಂಪ್ಯೂಟರ್‌ ಸೆಂಟರ್‌ ನಿರ್ದೇಶಕ ಮಹೇಶ ಭಟ್‌ ಹೇಳಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಾಗೂ ಧಾರವಾಡದ ಲಾಜಿಕ್‌ ಕಂಪ್ಯೂಟರ್‌ ಸೆಂಟರ್‌ ಸಹಯೋಗದಲ್ಲಿ ನಡೆದ ‘ರೆಸ್ಯೂಮ್‌ ಬರೆಯುವುದು ಮತ್ತು ಸಂದರ್ಶನ ಎದುರಿಸುವ ಕಲೆ ಹಾಗೂ ಆಧುನಿಕ ಜಗತ್ತಿನಲ್ಲಿ ಎಐ’ ವಿಷಯ ಕುರಿತು ಆಯೋಜಿಸಿದ್ದ ಜಿಲ್ಲಾಮಟ್ಟದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘ವಿದ್ಯಾರ್ಥಿಗಳು ತಮ್ಮ ಕೀಳರಿಮೆ ಬಿಡಬೇಕು. ಆತ್ಮವಿಶ್ವಾಸ ಬೆಳೆಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

ಲಾಜಿಕ್‌ ಕಂಪ್ಯೂಟರ್‌ ಸೆಂಟರ್‌ನ ಶಿವರಾಜ ದಸ್ತಿಕೊಪ್ಪ, ಡಾ.ಶಶಿಕಾಂತ ಕುಲಕರ್ಣಿ ಸಂಪನ್ಮೂಲ ವ್ಯಕ್ತಿಗಳಾಗಿ, ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾಲೇಜಿನ ಪ್ರಾಚಾರ್ಯ ಖಲೀಲ್‌ ಅಹ್ಮದ್ ಚಿಕ್ಕೇರೂರ, ಹಿರಿಯ ಪ್ರಾಧ್ಯಾಪಕ ಶಿವಪ್ಪ ಎಂ. ಕುರಿ, ಪ್ಲೇಸ್‌ಮೆಂಟ್‌ ಸೆಲ್‌ ಅಧಿಕಾರಿ ಕೆ.ಟಿ.ತಿಪ್ಪೆಸ್ವಾಮಿ,ಐಕ್ಯುಎಸಿ ಚಾಲಕ ಮಹಾಂತೇಶ ಮುಧೋಳ, ಸಹ ಸಂಚಾಲಕಿ ಜ್ಯೋತಿ ಬೋಳಣ್ಣವರ ಮತ್ತು ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.