ಗದಗ: ‘ಕೆ.ಎಸ್ ಈಶ್ವರಪ್ಪ ಒಬ್ಬ ಮಹಾನ್ ಪೆದ್ದ.ತಲೆಯಲ್ಲಿ ಮೆದುಳೇ ಇಲ್ಲದ ಮನುಷ್ಯ.ಅಹಿಂದ ಮುಖಂಡ ಅನ್ನವುದನ್ನು ಸಾಬೀತುಪಡಿಸಲು ಯಾವುದಾದರೂ ವಿಶ್ವವಿದ್ಯಾಲಯ ಪ್ರಮಾಣಪತ್ರ ಕೊಡುತ್ತದೆಯಾ’ಎಂದು ಶಾಸಕ ಸಿದ್ದರಾಮಯ್ಯ ಪ್ರಶ್ನಿಸಿದರು.
ಭಾನುವಾರ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ನಗರಕ್ಕೆ ಬಂದಿದ್ದ ಅವರು, ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
‘ಸಿದ್ದರಾಮಯ್ಯ ಸ್ವಯಂಘೋಷಿತ ಅಹಿಂದ ನಾಯಕ, ಅವರ ಅಹಿಂದ ಸಾಧನೆ ಗೊತ್ತಾಗಿಯೇ ಚಾಮುಂಡಿ ಕ್ಷೇತ್ರದ ಜನರು ಅವರನ್ನು ಓಡಿಸಿದ್ದಾರೆ’ ಎಂದು ಈಶ್ವರಪ್ಪ ಶನಿವಾರ ಗದುಗಿನಲ್ಲಿ ಹೇಳಿದ್ದರು.
‘ಬಿಜೆಪಿ ವರ್ಚಸ್ಸು ಕಡಿಮೆ ಮಾಡಲು ಕಾಂಗ್ರೆಸ್ ತಂತ್ರ ಮಾಡುತ್ತಿದೆ’ಎಂಬ ಗಾಲಿ ಜನಾರ್ದನ ರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ರೆಡ್ಡಿ ಬಿಜೆಪಿಯಲ್ಲೇ ಇಲ್ಲ.ಅಂದ ಮೇಲೆ ರೆಡ್ಡಿಗ್ಯಾಕೆ ಬಿಜೆಪಿ ಮಾತು, ಅಷ್ಟಕ್ಕೂ ಯಡಿಯೂರಪ್ಪ ಅವರೇ ರೆಡ್ಡಿ ಜೈಲಿಗೆ ಹೋಗಿ ಬಂದಿದ್ದಾರೆ ಎಂದು ಹೇಳಿಕೆ ನೀಡಿದ್ದಾರಲ್ಲಾ’ಎಂದರು.
ಸಚಿವ ಸಂಪುಟ ವಿಸ್ತರಣೆ ಕುರಿತು ಹೈಕಮಾಂಡ್ ಜತೆ ಚರ್ಚಿಸಿ ಮಾತನಾಡುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.