ADVERTISEMENT

ಜುಲೈನಲ್ಲಿ ಖೊಟ್ಟಿಪೈಸೆ ಚಿತ್ರ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2018, 14:18 IST
Last Updated 23 ಜೂನ್ 2018, 14:18 IST
ಕಿರಣ್‌ ಆರ್‌.ಕೆ
ಕಿರಣ್‌ ಆರ್‌.ಕೆ   

ಗದಗ:‘ಕಲಾವಿದ ರಾಮ ಚೇತನ್ ಹಾಗೂ ವೈಜನಾಥ ಬಿರಾದಾರ ಅಭಿನಯದ ‘ಖೊಟ್ಟಿ ಪೈಸೆ’ ಚಲಚಿತ್ರ ಜುಲೈನಲ್ಲಿ ಬಿಡುಗಡೆಯಾಗಲಿದೆ’ ಎಂದು ನಿರ್ದೇಶಕ ಕಿರಣ್‌ ಆರ್‌.ಕೆ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಉತ್ತರ ಕರ್ನಾಟಕದ ಭಾಷೆ, ಜನಜೀವನ ಆಧರಿಸಿ ಸಿನೆಮಾ ನಿರ್ಮಿಸಲಾಗಿದೆ. ಚಲಾವಣೆಯಲ್ಲಿ ಇಲ್ಲದ ನಾಣ್ಯ ಹಾಗೂ ಮನುಷ್ಯ ಸತ್ತ ಮೇಲೆ ಇರುವ ಬೆಲೆ ಎಷ್ಟು ಎನ್ನುವುದನ್ನು ಹೇಳಲು ಚಿತ್ರದಲ್ಲಿ ಪ್ರಯತ್ನಿಸಲಾಗಿದೆ’ ಎಂದರು.

‘ನಾಯಕ ಮತ್ತು ನಾಯಕಿ ಹೊರತುಪಡಿಸಿ ಉಳಿದ ಕಲಾವಿದರು ಉತ್ತರ ಕರ್ನಾಟಕದವರು. ಚಿತ್ರೀಕರಣ ಈ ಭಾಗದಲ್ಲೇ ನಡೆದಿದೆ. ಗಿರಿಜಾ ಕುಮಾರ್ ಚಿತ್ರದ ನಿರ್ಮಾಪಕರು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.