ಮುಳಗುಂದ: ‘ಪಟ್ಟಣದ, ವಿವಿಧ ವಾರ್ಡ್ಗಳಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ, ನಿರ್ಮಿಸಲಾದ ಅಂಗನಾಡಿ ಕೇಂದ್ರಗಳ ನೂತನ ಕಟ್ಟಡಗಳನ್ನ ಬುಧವಾರ ಪಟ್ಟಣ ಪಂಚಾಯ್ತಿ ಸದಸ್ಯ ಎನ್.ಆರ್.ದೇಶಪಾಂಡೆ ಉದ್ಘಾಟಿಸಿದರು.
ಗದಗ ತಾಲ್ಲೂಕು ಶಿಶು ಅಭಿವೃದ್ದಿ ಯೋಜನಾಧಿಕಾರಿ ಎಚ್.ಎಸ್.ಜೋಗೇರ, ರಾಧಾ, ಮುಳಗುಂದ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ವಿ.ಸುಂಕಾಪೂರ, ಪಟ್ಟಣ ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಂತೇಶ ನೀಲಗುಂದ, ಸದಸ್ಯರಾದ ನಾಗರಾಜ ದೇಶಪಾಂಡೆ,ವಿಜಯ ನೀಲಗುಂದ, ಕೆ.ಎಲ್. ಕರೇಗೌಡ, ಎಸ್.ಸಿ.ಬಡ್ನಿ, ಉಮಾ ಮಟ್ಟಿ,ಇಮಾಮಸಾಬ ಶೇಖ್, ಮಹಾದೇವಪ್ಪ ಗಡಾದ, ಚಂಪಾವತಿ ಗುಳೇದ, ನೀಲವ್ವ ಅಸುಂಡಿ, ಪಾರವ್ವ ಅಳ್ಳಣ್ಣವರ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಮಂಜುನಾಥ ಗುಳೇದ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಇದೇ ವೇಳೆ ತಿಗಡಿಕೇರಿ ಓಣಿಯಲ್ಲಿ ಸಿಸಿ ರಸ್ತೆ, ಅಬ್ಬಿಕೆರೆ ದಡದಲ್ಲಿ ಶ್ರೀ ಅಂಬಿಗರ ಚೌಡಯ್ಯ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.