ADVERTISEMENT

ಸಹಕಾರಿ ಸಂಘಕ್ಕೆ ಅಧ್ಯಕ್ಷರಾಗಿ ಪ್ರಕಾಶ ಆಯ್ಕೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2023, 14:19 IST
Last Updated 26 ಜುಲೈ 2023, 14:19 IST
ನರಗುಂದದ ಜಮಲಾಪೂರ ಓಣಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಪ್ರಕಾಶ ಪಟ್ಟಣಶೆಟ್ಟಿ, ಉಪಾಧ್ಯಕ್ಷರಾಗಿ ವಿಠಲ ಜಾಧವ ಅವಿರೋಧವಾಗಿ ಆಯ್ಕೆಯಾದರು
ನರಗುಂದದ ಜಮಲಾಪೂರ ಓಣಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಪ್ರಕಾಶ ಪಟ್ಟಣಶೆಟ್ಟಿ, ಉಪಾಧ್ಯಕ್ಷರಾಗಿ ವಿಠಲ ಜಾಧವ ಅವಿರೋಧವಾಗಿ ಆಯ್ಕೆಯಾದರು   

ನರಗುಂದ: ಪಟ್ಟಣದ ಜಮಲಾಪೂರ ಓಣಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಪ್ರಕಾಶ ಪಟ್ಟಣಶೆಟ್ಟಿ, ಉಪಾಧ್ಯಕ್ಷರಾಗಿ ವಿಠಲ ಜಾಧವ ಮಂಗಳವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.‌

ಚುನಾವಣಾಧಿಕಾರಿಯಾಗಿ ಆರ್.ಎನ್.ಗಡ್ಡಿ ಭಾಗವಹಿಸಿದ್ದರು. ಸಂಘದ ನಿರ್ದೇಶಕ ಮಂಜು ಮಡಿವಾಳರ, ರಾಜಾರಾಮ ಮುಳಿಕ, ಹನಮಂತ ಶಿಂಧೆ, ಯಲ್ಲವ್ವ ದೊಡ್ಡಮನಿ, ಹನಮವ್ವ ಮುಳ್ಳೂರ, ಗದಿಗೆಪ್ಪ ಸವದತ್ತಿ, ಯಲ್ಲಪ್ಪ ಭಜಂತ್ರಿ, ಸಂಘದ ವ್ಯವಸ್ಥಾಪಕ ಸಂಜು ಭೋಸ್ಲೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT