ADVERTISEMENT

10 ಗಂಟೆ ಬೆಂಗಳೂರು– ಮಂಗಳೂರು ಹೆದ್ದಾರಿ ಬಂದ್‌

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2018, 17:08 IST
Last Updated 11 ಡಿಸೆಂಬರ್ 2018, 17:08 IST

ಸಕಲೇಶಪುರ: ಬೆಂಗಳೂರು– ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ರಾತ್ರಿ ಕೊಲ್ಲಹಳ್ಳಿ ಬಳಿ ಗ್ಯಾಸ್‌ ಟ್ಯಾಂಕರ್ ಹಾಗೂ ಕಂಟೈನರ್‌ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದರಿಂದ ಸುಮಾರು 10 ಗಂಟೆ ಕಾಲ ಸಂಚಾರ ಸ್ಥಗಿತಗೊಂಡಿತ್ತು.

ಅಪಘಾತ ಸಂಭವಿಸಿದ ಸ್ಥಳದ ಒಂದು ಬದಿಯಲ್ಲಿ ಕಾಫಿ ತೋಟ, ಮತ್ತೊಂದು ಬದಿ ಆಳದಲ್ಲಿ ಭತ್ತದ ಗದ್ದೆ ಇದುದ್ದರಿಂದ ವಾಹನಗಳಿಗೆ ಮುಂದೆ ಸಾಗಲು ಜಾಗವಿರಲಿಲ್ಲ. ಹೀಗಾಗಿ ಹೆದ್ದಾರಿಯ ಎರಡು ಬದಿಯಲ್ಲಿ ಕಿಲೋ ಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಸ್ಥಳಕ್ಕೆ ಪೊಲೀಸ್‌ ವಾಹನ ಹೋಗುವುದಕ್ಕೂ ಕೂಡ ಸಾಧ್ಯವಾಗದಷ್ಟು ಟ್ರಾಫಿಕ್‌ ಜಾಮ್‌ ಆಗಿತ್ತು. ಇನ್‌ಸ್ಪೆಕ್ಟರ್‌ ವಸಂತ್‌, ಪಿಎಸ್‌ಐಗಳಾದ ರಾಘವೇಂದ್ರ, ಬ್ಯಾಟರಾಯಗೌಡ ಹಾಗೂ ಸಿಬ್ಬಂದಿ ರಾತ್ರಿಯಿಡಿ ಕಾರ್ಯಾಚರಣೆ ನಡೆಸಿದರು. ಅಪಘಾತಗೊಂಡಿದ್ದ ಎರಡೂ ವಾಹನಗಳನ್ನು ತೆರವುಗೊಳಿಸುವಷ್ಟರಲ್ಲಿ ಮಂಗಳವಾರ ಬೆಳಿಗ್ಗೆ 10 ಗಂಟೆಯಾಗಿತ್ತು.

ADVERTISEMENT

ಅಪಘಾತದಲ್ಲಿ ಟ್ಯಾಂಕರ್‌ ಚಾಲಕ ತಮಿಳುನಾಡಿನ ಅಬ್ದುಲ್‌ ರೆಹಮಾನ್‌ (28) ಸಾವನ್ನಪ್ಪಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.