ಹಾಸನ: ನಗರದ 15 ಜನರ ತಂಡವೊಂದು ಸುಮಾರು 7 ಸಾವಿರ ಕಿ.ಮೀ ಸಂಚರಿಸಲು ನಗರದಿಂದ ಮಂಗಳವಾರ ಪ್ರಯಾಣ ಬೆಳೆಸಿತು.
ವಿವಿಧ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಇವರು, ಬಿಡುವು ಮಾಡಿಕೊಂಡು ಈ ಸಾಹಸಮಯ ಬೈಕ್ ರೈಡ್ಗೆ ಮುಂದಾಗಿದ್ದಾರೆ. ತಿಂಗಳ ನಂತರ ವಾಪಸ್ ಮರಳಿಬರಲಿದ್ದಾರೆ.
ಈ ವೇಳೆ ಮಾತನಾಡಿದ ತಂಡದ ವಾಸುದೇವ್, ‘ಬೈಕ್ಮೂಲಕ ದೇಶದ ಎಲ್ಲಾ ಗಡಿಗಳನ್ನು ತಿರುಗಿ, ಅಮೃತಸರಕ್ಕೆ ತೆರಳಿ ದೇಶದ ಬಾವುಟ ಹಾರಿಸಲಾಗುವುದು. ಅಲ್ಲಿಂದ ಜಮ್ಮು ಕಾಶ್ಮೀರ್, ನಂತರ ಲಡಾಕ್ಗೆ ತೆರಳಲಾಗುವುದು.25 ದಿನದ ಪ್ರವಾಸದಲ್ಲಿ 15 ಜನರು 7 ಸಾವಿರ ಕಿ.ಮೀ ದೂರದ ಪ್ರಯಾಣ ಮಾಡಲಿದ್ದೇವೆ. ದೇಶದ ಗಡಿಯಲ್ಲಿ ಯೋಧರು ಇರುವ ಸ್ಥಿತಿ ಹಾಗೂ ಜೀವನ ನಡೆಸುತ್ತಿರುವ ವಿಚಾರ ತಿಳಿದು ಜನರಿಗೆ ತಿಳಿಸಲಾಗುವುದು’ ಎಂದರು.
ಮೋಹನ್ ಮಾತನಾಡಿ,‘ ಪ್ರವಾಸದಲ್ಲಿ ಒಟ್ಟು 15 ರಾಜ್ಯಗಳು ಬಂದು ಹೋಗುತ್ತದೆ. ಪ್ರವಾಸಕ್ಕಾಗಿಯೇ ಮೂರು ತಿಂಗಳಿನಿಂದ ನಡಿಗೆ, ಯೋಗಾಭ್ಯಾಸ ಮಾಡಿ ಸಿದ್ಧರಾಗಿದ್ದೇವೆ. ನಿತ್ಯ 700 ಕಿ.ಮೀ. ದೂರ ಪ್ರಯಾಣಿಸಿ, ವಿಶ್ರಾಂತಿ ಪಡೆದು ನಂತರ ಪ್ರಯಾಣವನ್ನು ಮುಂದುವರಿಸುವ ಗುರಿ ಹೊಂದಿದ್ದೇವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.