ADVERTISEMENT

ತ್ಯಾಗಿ ನಗರ ಪ್ರವೇಶಿಸಿದ ಸಂಘಸ್ಥ ತ್ಯಾಗಿಗಳು

​ಪ್ರಜಾವಾಣಿ ವಾರ್ತೆ
Published 20 ಜನವರಿ 2018, 9:47 IST
Last Updated 20 ಜನವರಿ 2018, 9:47 IST
ಶ್ರವಣಬೆಳಗೊಳದ ತ್ಯಾಗಿ ನಗರಕ್ಕೆ ವರ್ಧಮಾನ ಸಾಗರ ಮಹಾರಾಜರು ಮತ್ತು ಸಂಘಸ್ಥ ತ್ಯಾಗಿಗಳು ಪ್ರವೇಶ ಮಾಡಿದರು
ಶ್ರವಣಬೆಳಗೊಳದ ತ್ಯಾಗಿ ನಗರಕ್ಕೆ ವರ್ಧಮಾನ ಸಾಗರ ಮಹಾರಾಜರು ಮತ್ತು ಸಂಘಸ್ಥ ತ್ಯಾಗಿಗಳು ಪ್ರವೇಶ ಮಾಡಿದರು   

ಶ್ರವಣಬೆಳಗೊಳ: ಬಾಹುಬಲಿ ಮಹಾಮಸ್ತಕಾಭಿಷೇಕದ 3ನೇ ಬಾರಿ ಸಾನ್ನಿಧ್ಯ ವಹಿಸಿರುವ ವರ್ಧಮಾನ ಸಾಗರ ಮಹಾರಾಜರು ಮತ್ತು ಸಂಘಸ್ಥ ತ್ಯಾಗಿಗಳು ಪಟ್ಟಣದ ಹೊರ ವಲಯದ ತ್ಯಾಗಿ ನಗರಕ್ಕೆ ಶುಕ್ರವಾರ ಮಂಗಲ ಪ್ರವೇಶ ಮಾಡಿದರು.

ಈವರೆಗೂ ಪಟ್ಟಣದ ಮಠದ ಬಳಿ ಇರುವ ಹಳೆ ಧರ್ಮ ಶಾಲೆಯಲ್ಲಿ ವಾಸ್ತವ್ಯ ಮಾಡಿದ್ದರು. ಜಿಲ್ಲಾಡಳಿತ, ಮುನಿಗಳು, ಮಾತಾಜಿಯವರ ವಾಸ್ತವ್ಯಕ್ಕೆ ಮತ್ತು ಚೌಕಕ್ಕೆ (ಆಹಾರ ತಯಾರಿಸುವ ಸ್ಥಳ) ತಾತ್ಕಾಲಿಕವಾಗಿ ತಲಾ 500 ಕೊಠಡಿ ನಿರ್ಮಿಸಿದೆ.

ತ್ಯಾಗಿ ನಗರ ಪ್ರವೇಶದ ಕಾರ್ಯ ಕ್ರಮಕ್ಕೂ ಮುನ್ನ ಮಠದ ಬಳಿ ವರ್ಧಮಾನ ಸಾಗರ ಮಹಾರಾಜರ ಮತ್ತು ಸಂಘಸ್ಥ ತ್ಯಾಗಿಗಳ ಪಾದ ಪೂಜೆ ನೆರವೇರಿಸಲಾಯಿತು. ನಂತರ ಮಂಗಳ ವಾದ್ಯ, ಮೈಸೂರು ಬ್ಯಾಂಡ್‌ಸೆಟ್‌, ಕಳಶ ಹೊತ್ತ ಮಹಿಳೆಯರು, ಧರ್ಮ ಧ್ವಜ ಹಿಡಿದ ಬಾಲಕರು ಅಪಾರ ಭಕ್ತ ಸಮೂಹ ಮೆರವಣಿಗೆಯೊಂದಿಗೆ ತ್ಯಾಗಿ ನಗರ ಪ್ರವೇಶ ಮಾಡಿದ ತ್ಯಾಗಿ ವೃಂದಕ್ಕೆ ಪುಷ್ಪ ಅರ್ಪಿಸಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸ್ವಾಗತಿಸಿದರು.

ADVERTISEMENT

ವಿಶೇಷಾಧಿಕಾರಿ ಬಿ.ಎನ್‌.ವರಪ್ರಸಾದ್‌ ರೆಡ್ಡಿ, ತ್ಯಾಗಿ ಸೇವಾ ಸಮಿತಿ ಅಧ್ಯಕ್ಷ ಶ್ರೀಪಾಲ್‌ ಗಂಗ್‌ವಾಲ್‌, ರಾಮ್‌ ದಾಸ್‌, ಪ್ರತಿಷ್ಠಾಚಾರ್ಯ ಎಸ್‌.ಡಿ.ನಂದಕುಮಾರ್‌, ಮಹಿಳಾ ಸಮಾಜದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.