ಹೆತ್ತೂರು: ಯಸಳೂರು ಹೋಬಳಿಯ ಯಡಕೇರಿ ಗ್ರಾಮದಲ್ಲಿ ಕಾಡಾನೆಗಳು ದಾಳಿ ನಡೆಸಿ ಕಾಫಿ, ಬಾಳೆ, ಅಡಿಕೆ ಹಾಗೂ ಮೆಣಸಿಕಾಯಿ ಬೆಳೆಯನ್ನು ತುಳಿದು ಹಾಕಿವೆ. ಗ್ರಾಮದ ರಘು, ಬಾಲಕೃಷ್ಣ, ರಮೇಶ್ ಎಂಬುವರ ತೋಟದಲ್ಲಿನ ಅಡಿಕೆ, ಬಾಳೆ ತೋಟಕ್ಕೆ ಬುಧವಾರ ಮತ್ತು ಗುರುವಾರ ತಡರಾತ್ರಿ ನುಗ್ಗಿರುವ ಸುಮಾರು 18 ಕಾಡಾನೆಗಳ ಹಿಂಡೊಂದು ದಾಂದಲೆ ನಡೆಸಿ ಅಪಾರ ಪ್ರಮಾಣದ ಬೆಳೆಯನ್ನು ನಾಶ ಮಾಡಿದ್ದು, ಜೊತೆಗೆ ನೀರಾವರಿ ಸೌಲಭ್ಯಕ್ಕಾಗಿ ಇಟ್ಟಿದ್ದ ಪೈಪ್ಗಳನ್ನು ಸಹ ತುಳಿದು ಹಾಕಿದೆ.
ದಿನೇಶ್ ಎಂಬುವರ ಕಾಫಿ ತೋಟದಲ್ಲೂ ಸಹ ದಾಂದಲೆ ನಡೆಸಿದ ಕಾಡಾನೆಗಳು ತೋಟದಲ್ಲಿದ್ದ ಕಾಳುಮೆಣಸು, ಗೆಣಸು ಹಾಗೂ ಹೊಸದಗಿ ನಾಟಿ ಮಾಡಿದ ಕಾಫಿ ಗಿಡಗಳನ್ನು ತುಳಿದು ಹಾಕಿವೆ. ಆನೆಗಳ ಓಡಾಟದಿಂದ ತೋಟ, ಗದ್ದೆಗಳೂ ಹಾಳಾಗಿವೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.