ADVERTISEMENT

ನುಗ್ಗೇಹಳ್ಳಿ | ಹೆಜ್ಜೇನು ದಾಳಿಗೆ ಯುವಕ ಬಲಿ

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 2:46 IST
Last Updated 16 ಜುಲೈ 2025, 2:46 IST
ಮೃತ ಬಿಕೆ ಚರಣ್ ಭಾವಚಿತ್ರ
ಮೃತ ಬಿಕೆ ಚರಣ್ ಭಾವಚಿತ್ರ   

ನುಗ್ಗೇಹಳ್ಳಿ: ಹೋಬಳಿಯ ಬಾಣನಕೆರೆ ಗ್ರಾಮದ ಬಿಕೆ ಚರಣ್ (30) ಹೆಜ್ಜೇನು ದಾಳಿಗೆ ಮೃತಪಟ್ಟಿದ್ದು ಅವರ ತಂದೆ ಕುಮಾರಣ್ಣ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಘಟನೆ ವಿವರ: ಹೋಬಳಿಯ ಬಾಣನಕೆರೆ ಗ್ರಾಮದ ಪಿ ಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಕುಮಾರಣ್ಣ ತಮ್ಮ ಪುತ್ರ ಬಿಕೆ ಚರಣ್ ಅವರೊಂದಿಗೆ ಸೋಮವಾರ ಮಧ್ಯಾನ ತೋಟಕ್ಕೆ ತೆರಳಿದ ಸಂದರ್ಭದಲ್ಲಿ ಇವರ ಮೇಲೆ ಹೆಜ್ಜೇನು ದಾಳಿ ಮಾಡಿದ್ದು ಸ್ಥಳೀಯರು ರಕ್ಷಣೆ ಮಾಡಿ ಬೆಳ್ಳೂರು ಕ್ರಾಸ್ ನಲ್ಲಿರುವ ಆದಿಚುಂಚನಗಿರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಿಕೆ ಚರಣ್ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದು ಅವರ ತಂದೆ ಕುಮಾರಣ್ಣ ಅವರು ಪ್ರಾಣಪಾಯದಿಂದ ಪಾರಾಗಿದ್ದು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಈ ಸಂಬಂಧ ನುಗ್ಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT