ಹಾಸನ: ಬಿಜೆಪಿ ಬೆಂಬಲಿಗರ ಬಳಿ ದಾಖಲೆ ಇಲ್ಲದ ₹ 2 ಲಕ್ಷ ನಗದು ಪತ್ತೆಯಾಗಿದೆ.
ಈ ಸಂಬಂಧ ಬಿಜೆಪಿ ಅಭ್ಯರ್ಥಿ ಮಂಜು ಬೆಂಬಲಿಗರಾದ ಕಾಂಗ್ರೆಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ನಾರಾಯಣಗೌಡ ಹಾಗೂ ಹೇಮಂತ್ ಇಬ್ಬರನ್ನೂ ಸ್ಯಾಂಟ್ರೋ ಕಾರು ಸಮೇತ ಹಾಸನದ ಬಡಾವಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಾಸನ ಹೊರ ವಲಯದ ಕೆ.ಕೆ.ರೆಸಿಡೆನ್ಸಿಯಲ್ಲಿ ನಾರಾಯಣಗೌಡ ಮತ್ತು ಹೇಮಂತ್ ಎಂಬುವರು ತಲಾ ₹ 500 ಮುಖಬೆಲೆಯ ₹ 2 ಲಕ್ಷಕ್ಕೂ ಅಧಿಕ ಹಣ ಇಟ್ಟುಕೊಂಡಿದ್ದರು. ಖಚಿತ ಮಾಹಿತಿ ಮೇರೆಗೆ ಫ್ಲೈಯಿಂಗ್ ಸ್ಕ್ವಾಡ್ ಹಾಗೂ ಕೆ.ಆರ್.ಪುರಂ ಪೋಲೀಸರು ದಾಳಿ ನಡೆಸಿ, ಹಣ, ಬಿಜೆಪಿ ಪಕ್ಷಕ್ಕೆ ಸಂಬಂಧಪಟ್ಟ ಕರಪತ್ರಗಳು, ದೇವರ ಫೋಟೋಗಳನ್ನು ವಶಕ್ಕೆ ಪಡೆದರು.
ಮತದಾರರಿಗೆ ಹಂಚಲು ಈ ಹಣ ಕೊಂಡೊಯ್ಯಲಾಗುತ್ತಿತ್ತು ಎಂದು ಜೆಡಿಎಸ್ ಕಾರ್ಯಕರ್ತ ಚಿದಂಬರ್ ಆರೋಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.