ADVERTISEMENT

ಚನ್ನರಾಯಪಟ್ಟಣ: ಮುಂಜಾಗ್ರತೆಯಿಂದ ಕ್ಯಾನ್ಸರ್ ತಡೆ; ಜಗದೀಶ್

ಜಾಗೃತಿ ದಿನ: ಹಾಸನದ ಡಾ.ಸಿ.ಎನ್. ಜಗದೀಶ್

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 4:59 IST
Last Updated 7 ಫೆಬ್ರುವರಿ 2026, 4:59 IST
<div class="paragraphs"><p>ಚನ್ನರಾಯಪಟ್ಟಣದ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶ್ವಕ್ಯಾನ್ಸರ್ ದಿನಾಚರಣೆ ಕಾರ್ಯಕ್ರಮದಲ್ಲಿ ಹಾಸನದ ಡಾ.ಸಿ.ಎನ್. ಜಗದೀಶ್ ಮಾತನಾಡಿದರು. ಡಾ.ವಿ. ಮಹೇಶ್. ಎಂ.ಕೆ. ಮಂಜುನಾಥ್, ಎಂ. ನಿರುಪಮಾ ಭಾಗವಹಿಸಿದ್ದರು</p></div>

ಚನ್ನರಾಯಪಟ್ಟಣದ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶ್ವಕ್ಯಾನ್ಸರ್ ದಿನಾಚರಣೆ ಕಾರ್ಯಕ್ರಮದಲ್ಲಿ ಹಾಸನದ ಡಾ.ಸಿ.ಎನ್. ಜಗದೀಶ್ ಮಾತನಾಡಿದರು. ಡಾ.ವಿ. ಮಹೇಶ್. ಎಂ.ಕೆ. ಮಂಜುನಾಥ್, ಎಂ. ನಿರುಪಮಾ ಭಾಗವಹಿಸಿದ್ದರು

   

ಚನ್ನರಾಯಪಟ್ಟಣ: ಉತ್ತಮ ಜೀವನ ಕ್ರಮದಿಂದ ಕ್ಯಾನ್ಸರ್ ತಡೆಗಟ್ಟಬಹುದು ಎಂದು ಹಾಸನದ ಡಾ.ಸಿ.ಎನ್. ಜಗದೀಶ್ ಹೇಳಿದರು.

ಪಟ್ಟಣದ ಆದಿಚುಂಚನಗಿರಿ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕ ಮತ್ತು ರೆಡ್ ರಿಬ್ಬನ್ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶ್ವ ಕ್ಯಾನ್ಸರ್ ದಿನದ ಜಾಗೃತಿಯಲ್ಲಿ ಅವರು ಮಾತನಾಡಿದರು.  ಮದ್ಯಪಾನ ಮತ್ತು ಧೂಮಪಾನ , ಅನಾರೋಗ್ಯಕರ ಆಹಾರದ ಪದ್ಧತಿ ಮತ್ತು ದೈಹಿಕ ಚಟುವಟಿಕೆಯ ಕೊರತೆಯಿಂದ ಕ್ಯಾನ್ಸರ್ ಬರುತ್ತದೆ. ಇತ್ತೀಚೆಗೆ  ಸಂಖ್ಯೆ ಹೆಚ್ಚಾಗುತ್ತಿದೆ ಎಂದರು.

ADVERTISEMENT

ನಿಯಮಿತ ವ್ಯಾಯಾಮ, ಯೋಗಾಸನ, ಧ್ಯಾನ,  ಆಹಾರದಲ್ಲಿ ತರಕಾರಿ ಹೆಚ್ಚು ಬಳಕೆ ಸೇರಿದಂತೆ ಸಮತೋಲನ ಆಹಾರ ಸೇವಿಸಬೇಕು. ಮದ್ಯಪಾನ ಮತ್ತು ಧೂಮಪಾನ ತ್ಯಜಿಸಬೇಕು ಎಂದು ತಿಳಿಸಿದರು.

ಪಟ್ಟಣದ ಪುಣ್ಯ ಆಸ್ಪತ್ರೆಯ ಮುಖ್ಯಸ್ಥ ಡಾ. ವಿ. ಮಹೇಶ್ ಮಾತನಾಡಿ, ಜೀವನ ಶೈಲಿಯಿಂದ ಕ್ಯಾನ್ಸರ್ ಬರುತ್ತದೆ. ಕ್ಯಾನ್ಸರ್ ಬಂದಾಗ ಸೂಕ್ತ ಚಿಕಿತ್ಸೆ ಪಡೆಯುವುದರಿಂದ ಗುಣಮುಖರಾಗಬಹುದು. ಕ್ಯಾನ್ಸರ್ ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಕಾಲೇಜು ಪ್ರಾಂಶುಪಾಲ ಎಂ.ಕೆ. ಮಂಜುನಾಥ್ ಮಾತನಾಡಿ, ಉತ್ತಮ ಜೀವನ ಕ್ರಮ ಅನುಸರಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು. ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಸಂಚಾಲಕಿ ಎಂ. ನಿರುಪಮಾ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.