ADVERTISEMENT

ಹವಾಮಾನ ವೈಪರೀತ್ಯ: ಭತ್ತದ ಕಟಾವಿಗೆ ತೊಂದರೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2021, 7:31 IST
Last Updated 5 ಜನವರಿ 2021, 7:31 IST
ಅರಕಲಗೂಡು ತಾಲ್ಲೂಕಿನಲ್ಲಿ ಮಳೆಯ ಆತಂಕದಲ್ಲಿ ರೈತರು ತರಾತುರಿಯಲ್ಲಿ ಕೊಯ್ಲು ನಡೆಸಿ ಭತ್ತದ ಪೈರನ್ನು ಬಣವೆ ಹಾಕುತ್ತಿರುವ ದೃಶ್ಯ
ಅರಕಲಗೂಡು ತಾಲ್ಲೂಕಿನಲ್ಲಿ ಮಳೆಯ ಆತಂಕದಲ್ಲಿ ರೈತರು ತರಾತುರಿಯಲ್ಲಿ ಕೊಯ್ಲು ನಡೆಸಿ ಭತ್ತದ ಪೈರನ್ನು ಬಣವೆ ಹಾಕುತ್ತಿರುವ ದೃಶ್ಯ   

ಅರಕಲಗೂಡು: ತಾಲ್ಲೂಕಿನಲ್ಲಿ ಮೋಡ ಮುಸುಕಿದ ವಾತಾವರಣ ಹಾಗೂ ತುಂತುರು ಮಳೆ ಬೀಳುತ್ತಿರುವುದರಿಂದ ಭತ್ತದ ಕಟಾವು ಮಾಡುತ್ತಿರುವ ರೈತರನ್ನು ಆತಂಕಕ್ಕೆ ದೂಡಿದೆ.

ತಾಲ್ಲೂಕಿನ ಹಾರಂಗಿ, ಹೇಮಾವತಿ ಹಾಗೂ ಕಟ್ಟೇಪುರ ನಾಲಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ಬೆಳೆ ಕಟಾವು ಕಾರ್ಯ ಚುರುಕಾಗಿತ್ತು. ಆದರೆ, ಹವಾಮಾನ ವೈಪರೀತ್ಯ ಹಾಗೂ ಆಗಾಗ ಬೀಳುವ ತುಂತುರು ಮಳೆ ಭತ್ತದ ಕಟಾವಿಗೆ ಅಡ್ಡಿಯಾಗಿದೆ.

ಕೆಲವು ಕಡೆ ರೈತರು ಭತ್ತದ ಕಟಾವು ಅರೆಬರೆ ಮಾಡಿದ್ದು, ಬಿಸಿಲು ಬೀಳದ್ದರಿಂದ ಗದ್ದೆಗಳಲ್ಲಿ ಹುಲ್ಲು ಒಣಗಿಲ್ಲ, ಗುಡ್ಡೆ ಹಾಕಲು ಆಗುತ್ತಿಲ್ಲ. ಆದರೂ, ಮಳೆ ಬರುವ ಭೀತಿ ನಡುವೆಯೇ ಹಲವೆಡೆ ರೈತರು ತರಾತುರಿಯಲ್ಲಿ ಬಣವೆ ಹಾಕುತ್ತಿದ್ದಾರೆ.

ADVERTISEMENT

‘ಮೊದಲೇ ಕೂಲಿ ಕಾರ್ಮಿಕರ ಕೊರತೆ ಇದೆ. ಮಳೆಯಿಂದಾಗಿ ಕಟಾವಿಗೆ ಬಂದಿರುವ ಭತ್ತದ ಫಸಲು ಗದ್ದೆಗಳಲ್ಲಿ ಹಾಳಾಗುತ್ತಿದೆ’ ಎಂದು ರೈತರು ತಮ್ಮ ನೋವು ಹೇಳಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.