ADVERTISEMENT

ದೇವರೇ ನನ್ನ ಉಳಿಸಪ್ಪಾ!: ಚರ್ಚ್‌ ಎದುರು ಕಣ್ಣೀರಿಟ್ಟ ಸೋಂಕಿತೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2021, 13:10 IST
Last Updated 23 ಏಪ್ರಿಲ್ 2021, 13:10 IST
   

ಹಾಸನ: ಕೊರೊನಾ ಸೋಂಕಿತೆಯೊಬ್ಬರು ಗುರುವಾರ ರಾತ್ರಿ ಜಿಲ್ಲಾಸ್ಪತ್ರೆಯಿಂದ ಹೊರಗೆ ಬಂದು ಸಮೀಪದ ಚರ್ಚ್‌ ಎದುರು ‘ದೇವರೇ ನನ್ನ ಉಳಿಸಪ್ಪಾ’ಎಂದು ಕಣ್ಣೀರಿಟ್ಟಿದ್ದಾರೆ.

ಆಸ್ಪತ್ರೆಯ ಸಿಬ್ಬಂದಿ ಕಣ್ತಪಿಸಿ ನಗರದ ಆರ್‌.ಸಿ.ರಸ್ತೆಯ ಸಿಎಸ್ಐ ವೆಸ್ಲಿ ದೇವಾಲಯ ಎದುರು ‘ಏಸುವೇ ನನ್ನ ಉಳಿಸು. ಹೇಗಾದರೂ ಮಾಡಿ ನನ್ನ ಉಳಿಸಪ್ಪ’ ಎಂದು ಮಹಿಳೆ ದೇವರಿಗೆ ಮೊರೆಯಿಟ್ಟಿದ್ದಾರೆ. ಬಳಿಕ‌ ಕುಟುಂಬದ ಸದಸ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ಅವರ ಮನವೊಲಿಸಿ ಆಸ್ಪತ್ರೆಗೆ ಕರೆದೊಯ್ದುರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT