ADVERTISEMENT

ದಲಿತ ಸಾಹಿತ್ಯ ಪರಿಷತ್ ಪದಾಧಿಕಾರಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 4:57 IST
Last Updated 18 ನವೆಂಬರ್ 2025, 4:57 IST
ಹೊಳೆನರಸೀಪುರ ತಾಲ್ಲೂಕು ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಡಿ.ಕೆ.ವಸಂತಯ್ಯ, ಉಪಾಧ್ಯಕ್ಷರಾಗಿ ಕಡುವಿನಹೊಸಹಳ್ಳಿ ಕೆ.ಎಂ.ನಾಗರಾಜು, ಖಜಾಂಚಿಯಾಗಿ ಎಚ್.ಗಿರೀಶ್, ಗೌರವಾಧ್ಯಕ್ಷರಾಗಿ ಬಿ.ಕೆ.ವೆಂಕಟೇಶ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು
ಹೊಳೆನರಸೀಪುರ ತಾಲ್ಲೂಕು ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಡಿ.ಕೆ.ವಸಂತಯ್ಯ, ಉಪಾಧ್ಯಕ್ಷರಾಗಿ ಕಡುವಿನಹೊಸಹಳ್ಳಿ ಕೆ.ಎಂ.ನಾಗರಾಜು, ಖಜಾಂಚಿಯಾಗಿ ಎಚ್.ಗಿರೀಶ್, ಗೌರವಾಧ್ಯಕ್ಷರಾಗಿ ಬಿ.ಕೆ.ವೆಂಕಟೇಶ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು   

ಹೊಳೆನರಸೀಪುರ: ತಾಲ್ಲೂಕು ದಲಿತ ಸಾಹಿತ್ಯ ಪರಿಷತ್ ಪದಾಧಿಕಾರಿಗಳ ಆಯ್ಕೆ ಈಚೆಗೆ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ನಡೆಯಿತು.

ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಡಿ.ಕೆ.ವಸಂತಯ್ಯ, ಉಪಾಧ್ಯಕ್ಷರಾಗಿ ಕಡುವಿನಹೊಸಹಳ್ಳಿ ಕೆ.ಎಂ.ನಾಗರಾಜು, ಖಜಾಂಚಿಯಾಗಿ ಎಚ್.ಗಿರೀಶ್ ಹಾಗೂ ಗೌರವಾಧ್ಯಕ್ಷರಾಗಿ ಬಿ.ಕೆ.ವೆಂಕಟೇಶ್ ಆಯ್ಕೆಯನ್ನು ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಕಾರ್ಯದರ್ಶಿ ಹಾನ್‍ಗಲ್ ದೇವರಾಜ್ ಘೋಷಿಸಿದ್ದಾರೆ ಎಂದು ಆಯ್ಕೆಯಾದ ನೂತನ ಅಧ್ಯಕ್ಷ ಡಿ.ಕೆ.ವಸಂತಯ್ಯ ತಿಳಿಸಿದರು.

ಸಭೆಗೂ ಮುನ್ನ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಸಾಲುಮರದ ತಿಮ್ಮಕ್ಕನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.

ADVERTISEMENT

ಸಂಘಟನಾ ಕಾರ್ಯದರ್ಶಿ ಕೃಷ್ಣಯ್ಯ, ಸೋಮಶೇಖರ್, ಕೃಷ್ಣದಾಸ್, ಉಪನ್ಯಾಸಕ ಬಿ.ಕೆ.ಶಿವರಾಮ್, ದಲಿತ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಎಚ್.ಟಿ.ಲಕ್ಷ್ಮಣ ಸಭೆಯಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.