ಹಾಸನ: ಸಕಲೇಶಪುರ ತಾಲ್ಲೂಕಿನ ಬೆಲಗೂಡು ಹೋಬಳಿಯ ಈಶ್ವರಹಳ್ಳಿಯಲ್ಲಿ ಸೋಮವಾರ ಬೆಳಿಗ್ಗೆ ಒಂಟಿ ಆನೆಯೊಂದು ನಿರ್ಭಯವಾಗಿ ಓಡಾಡಿದೆ.
‘ಭೀಮ’ ಎಂದು ಹೆಸರಿಟ್ಟಿರುವ ಈ ಕಾಡಾನೆಯು, ಏಕಾಏಕಿ ಗ್ರಾಮದೊಳಗೆ ನುಗ್ಗಿದ್ದರಿಂದ ಗ್ರಾಮಸ್ಥರು ಭೀತಿಗೆ ಒಳಗಾದರು.
ಮಲೆನಾಡಿನಲ್ಲಿ ಇದೀಗ ನಿತ್ಯ ಆನೆಗಳ ದರ್ಶನ ಆಗುತ್ತಿದೆ. ಭತ್ತದ ಕಟಾವು ಮಾಡಿರುವುದರಿಂದ ಮೇವು ಸಿಗುತ್ತಿದ್ದು, ಆನೆಗಳು ಗ್ರಾಮಗಳು, ತೋಟ, ಗದ್ದೆಗಳಿಗೆ ಲಗ್ಗೆ ಇಡುತ್ತಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.