ಹಾಸನ: ಸ್ವಾಮಿ ವಿವೇಕಾನಂದ ಯುವ ಸಬಲೀಕರಣ ನಿಗಮ ಸ್ಥಾಪಿಸುವಂತೆ ಆಗ್ರಹಿಸಿ ತುಮಕೂರು ಜಿಲ್ಲೆಯಸಿರಾ ಯುವಜನ ಒಕ್ಕೂಟ ಹಮ್ಮಿಕೊಂಡಿರುವ ಮಂಗಳೂರುವರೆಗಿನ ಬೈಕ್ ರ್ಯಾಲಿ ಶನಿವಾರ ಹಾಸನತಲುಪಿತು.
ಸಿರಾ ಯುವಜನ ಒಕ್ಕೂಟದ ಸದಸ್ಯರು ತುಮಕೂರು, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ಚಿತ್ರದುರ್ಗಜಿಲ್ಲೆಗಳಲ್ಲಿ ಬೈಕ್ ಜಾಥಾ ನಡೆಸುವರು. ಮಂಗಳೂರಿನಲ್ಲಿ ಯುವ ಜನರು ಯುವ ಸಬಲೀಕರಣ ನಿಗಮಸ್ಥಾಪನಗೆ ಒತ್ತಾಯಿಸಿ ನಡೆಸುತ್ತಿರುವ ‘ಯುವಜನ ಹಕ್ಕುಗಳ ಆಂದೋಲನ’ಕ್ಕೆ ಬೆಂಬಲ ಸೂಚಿಸಿ, ಅಲ್ಲಿಆಯೋಜಿಸಿರುವ ಯುವಜನ ಹಬ್ಬದಲ್ಲಿ ಭಾಗವಹಿಸಲಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿರಾ ಯುವಜನ ಒಕ್ಕೂಟದ ಸಿ.ಎಂ.ಎಸ್. ಗೌಡ, ‘ಯುವಜನರು ದೇಶದ
ಆಸ್ತಿ ಎಂದು ಸರ್ಕಾರ ಮತ್ತು ಸಮಾಜ ಪ್ರತಿಪಾದಿಸುತ್ತವೆ. ದೇಶದ ಜನಸಂಖ್ಯೆಯಲ್ಲಿ ಶೇಕಡಾ 50 ರಷ್ಟು ಯುವಸಮುದಾಯವಿದೆ. ಕರ್ನಾಟಕದಲ್ಲಿ 1 ಕೋಟಿ 80 ಲಕ್ಷ ಯುವ ಜನರಿದ್ದಾರೆ. ಇದಕ್ಕಾಗಿ ರಾಜ್ಯದಲ್ಲಿ ಸ್ವಾಮಿವಿವೇಕಾನಂದ ಯುವ ಸಬಲೀಕರಣ ನಿಗಮ ಸ್ಥಾಪನೆಗೆ ಕರ್ನಾಟಕ ರಾಜ್ಯ ಯುವ ನೀತಿಯು 2021ರಲ್ಲಿಶಿಫಾರಸು ಮಾಡಿತ್ತು. ಅದರೆ, ಅಂದಿನ ಬಿಜೆಪಿ ಸರ್ಕಾರದ ಅವಧಿ ಪೂರ್ಣಗೊಂಡಿದ್ದರಿಂದ ನಿಗಮಕ್ಕೆಹಿನ್ನಡೆಯಾಯಿತು’ ಎಂದರು.
‘ರಾಜ್ಯದಲ್ಲಿ ಈಗ ಮತ್ತೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಸಿರಾ ಯುವಜನ ಒಕ್ಕೂಟವು ಹಲವು ಬಾರಿ
ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಆದರೆ ಇನ್ನೂ ಗಮನಹರಿಸಿಲ್ಲ. ನಿಗಮ ಸ್ಥಾಪನೆಯಾದರೆ ಎಲ್ಲ ಜಾತಿ, ಧರ್ಮಗಳಯುವ ಜನರಿಗೆ ಅನುಕೂಲವಾಗಲಿದೆ’ ಎಂದರು.
ಒಕ್ಕೂಟದ ಸದಸ್ಯರಾದ ಭವ್ಯ, ಮೇಘಾ, ಪೂಜಾ, ಜಲಜಾ, ಚಂದ್ರಕಲಾ, ಜಿ.ಕೆ.ಮಂಜುನಾಥ,
ಅಜೇಯ್, ಭೂತರಾಜು, ಮಂಜುನಾಥ, ಜೆ.ಎಸ್.ಜನಾರ್ಧನ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.