ಹಳೇಬೀಡು: ಸೂಕ್ಷ್ಮ ಕುಸುರಿ ಕೆತ್ತನೆಯ ಶಿಲ್ಪಕಲೆಯೊಂದಿಗೆ ಭಾರತೀಯ ಸಂಸ್ಕೃತಿ ಹಾಗೂ ಧಾರ್ಮಿಕ ಪ್ರಜ್ಞೆಯನ್ನು ಹೊಯ್ಸಳರು ಎತ್ತಿ ಹಿಡಿದಿದ್ದಾರೆ.
ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯದಲ್ಲಿ ಪುರಾಣ ಪುಣ್ಯ ಕಥೆಗಳ ಆಕರ್ಷಕ ವಿಗ್ರಹದೊಂದಿಗೆ ಗಣೇಶ ಮೂರ್ತಿಗಳು ಚಿತ್ತಾಕರ್ಷಕವಾಗಿವೆ. ಇಲಿಯ ಮೇಲೆ ನಾಟ್ಯವಾಡುವ ಗಣಪ, ಕಮಲದ ಮೇಲೆ ನಾಟ್ಯ ಮಾಡುವ ಗಣೇಶನ ವಿಗ್ರಹಗಳು ಭಕ್ತರನ್ನು ಸೆಳೆಯುತ್ತವೆ.
ಪ್ರವೇಶ ದ್ವಾರದ ಪಕ್ಕದಲ್ಲಿರುವ ಎಡಮುರಿ ಗಣೇಶ ದೇವಾಲಯ ಪ್ರವೇಶಿಸಿದಾಕ್ಷಣ ಭಕ್ತರಿಗೆ ದರ್ಶನ ನೀಡುತ್ತಾನೆ.
ದಕ್ಷಿಣ ದ್ವಾರದ ಹೊಯ್ಸಳ ಲಾಂಛನ ಎದುರಿನಲ್ಲಿರುವ 15 ಅಡಿ ಎತ್ತರದ ಗಣೇಶನನ್ನು ನೋಡಿದಾಗ ಮನಸ್ಸು ಪ್ರಫುಲ್ಲವಾಗುತ್ತದೆ.
ಶಿಲ್ಪಿಗಳ ಕೈಚಳಕದಿಂದ ಮೂಡಿರುವ ವಿಗ್ರಹಗಳು ಸೂಜಿಗಲ್ಲಿನಂತೆ ಸೆಳೆಯುತ್ತವೆ. ಗಣೇಶ ಹಬ್ಬದಂದು ಹೊಯ್ಸಳೇಶ್ವರ ದೇಗುಲದ ನಕ್ಷತ್ರಾಕಾರದ ಜಗುಲಿಯಲ್ಲಿ ಒಂದು ಸುತ್ತು ಸಾಗಿದರೆ ವಿವಿಧ ಭಂಗಿಯ ಗಣೇಶ ಮೂರ್ತಿಗಳ ದರ್ಶನವಾಗುತ್ತವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.