ADVERTISEMENT

ಶ್ರವಣಬೆಳಗೊಳ: ಅಂತರಾಳ ಪಾರ್ಶ್ವನಾಥಸ್ವಾಮಿಗೆ ಮಹಾಭಿಷೇಕ

​ಪ್ರಜಾವಾಣಿ ವಾರ್ತೆ
Published 20 ಜನವರಿ 2021, 2:57 IST
Last Updated 20 ಜನವರಿ 2021, 2:57 IST
ಶ್ರವಣಬೆಳಗೊಳದ ಚಿಕ್ಕಬೆಟ್ಟದ ಅಂತರಾಳ ಪಾರ್ಶ್ವನಾಥ ಸ್ವಾಮಿಗೆ ಅರಿಶಿಣದ ಅಭಿಷೇಕ ನೆರವೇರಿತು.
ಶ್ರವಣಬೆಳಗೊಳದ ಚಿಕ್ಕಬೆಟ್ಟದ ಅಂತರಾಳ ಪಾರ್ಶ್ವನಾಥ ಸ್ವಾಮಿಗೆ ಅರಿಶಿಣದ ಅಭಿಷೇಕ ನೆರವೇರಿತು.   

ಶ್ರವಣಬೆಳಗೊಳ: ಚಂದ್ರಗಿರಿಯ ಚಿಕ್ಕಬೆಟ್ಟದಲ್ಲಿರುವ ಅಂತರಾಳ ಪಾರ್ಶ್ವನಾಥ ಸ್ವಾಮಿಗೆ ಪುಷ್ಯ ಮಾಸದ ಶುದ್ಧ ಬಹುಳ ಪಂಚಮಿ ಪ್ರಯುಕ್ತ ಧಾರ್ಮಿಕ ವಿಧಿವಿಧಾನಗಳು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಶ್ರದ್ಧಾ ಭಕ್ತಿಯಿಂದ ನೆರವೇರಿದವು.

16 ಅಡಿ ಎತ್ತರದ 7 ಹೆಡೆಯ ಸರ್ಪದ ಸುಂದರ ಅಂತರಾಳ ಪಾರ್ಶ್ವನಾಥ ಸ್ವಾಮಿಯ ಸನ್ನಿಧಿಯಲ್ಲಿ ಮಂಗಳ ಕಲಶ ಸ್ಥಾಪಿಸಲಾಗಿತ್ತು. ನಂತರ ಜಲ, ಬೆಣ್ಣೆ, ಕ್ಷೀರ, ಅರಿಸಿನಗಳಿಂದ ಮಹಾಭಿಷೇಕ ನಡೆಸಿ ಪುಷ್ಪವೃಷ್ಟಿ ಮಾಡಲಾಯಿತು.

ಶಾಂತಿಧಾರದೊಂದಿಗೆ ವಿವಿಧ ನೈವೇದ್ಯಗಳನ್ನು ಅರ್ಪಿಸಿ ಅಷ್ಟವಿಧಾರ್ಚನೆಯೊಂದಿಗೆ ಮಹಾಮಂಗಳಾರತಿ ಮಾಡಲಾಯಿತು.

ADVERTISEMENT

ಪೂಜೆಯ ನೇತೃತ್ವವನ್ನು ಎಂ.ಪಿ.ಶಾಂತಕುಮಾರ್‌, ಎಸ್‌.ಎಸ್‌.ವಿಮಲ್‌ ವಹಿಸಿದ್ದು ಭಕ್ತಾದಿಗಳಿಗೆ ಗಂಧೋದಕ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.