ಹಾಸನ: ಶುಕ್ರವಾರ ರಾತ್ರಿ ಸುರಿದ ಮಳೆಯಿಂದ ಚನ್ನರಾಯಪಟ್ಟಣ ತಾಲ್ಲೂಕಿನ ನುಗ್ಗೆಹಳ್ಳಿ ಹೋಬಳಿ ನುಗ್ಗೆಹಳ್ಳಿಯಿಂದ ಹುಲಿಕೆರೆಗೆ ಹೋಗುವ ರಸ್ತೆ ಅತ್ತಿಹಳ್ಳಿ ಮಧ್ಯ ಇರುವ ಚೆನ್ನ ಕಟ್ಟೆ ಕೆರೆ ಏರಿ ಒಡೆದು, ರೈತರ ತೋಟ ಜಲಾವೃತವಾಗಿದೆ.
ಬಾಗೂರು ಕೆರೆ ಕೊಡಿಯಲ್ಲಿ ಭಾರಿ ಪ್ರಾಮಾಣದಲ್ಲಿ ನೀರು ಬರುತ್ತಿರುವುದು ಇದರಿಂದ ನುಗ್ಗೇಹಳ್ಳಿ ಬಾಗೂರು ಮಾರ್ಗದ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಹಿರೀಸಾವೆ ಹೋಬಳಿಯಲ್ಲಿ ಶುಕ್ರವಾರ ರಾತ್ರಿ ಸುರಿದ ಮಳೆಯಿಂದ ಹಳ್ಳ ತುಂಬಿ ರಾಜ್ಯ ಹೆದ್ದಾರಿ 8 ರ ರೈಲ್ವೆ ಮೇಲ್ಸೇತುವೆ ಬಳಿ ರಸ್ತೆಯಲ್ಲಿ ನೀರು ಹರಿಯುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.