ADVERTISEMENT

‘ಸೋಂಕಿತ ಪೊಲೀಸರ ರಕ್ಷಣೆ ಎಲ್ಲರ ಹೊಣೆ’

ಕಂಟೈನ್‌ಮೆಂಟ್ ಪ್ರದೇಶಕ್ಕೆ ಐಜಿಪಿ ವಿಪುಲ್‌ ಕುಮಾರ್‌ ಭೇಟಿ

​ಪ್ರಜಾವಾಣಿ ವಾರ್ತೆ
Published 28 ಮೇ 2020, 17:41 IST
Last Updated 28 ಮೇ 2020, 17:41 IST
ಹೊಳೆನರಸೀಪುರದ ಪೊಲೀಸರು ಕ್ವಾರಂಟೈನ್‌ ಆದ ಮನೆಗಳಿಗೆ ದಕ್ಷಿಣ ವಲಯ ಐಜಿಪಿ ವಿಫುಲ್‌ಕುಮಾರ್ ಭೇಟಿ ನೀಡಿದರು
ಹೊಳೆನರಸೀಪುರದ ಪೊಲೀಸರು ಕ್ವಾರಂಟೈನ್‌ ಆದ ಮನೆಗಳಿಗೆ ದಕ್ಷಿಣ ವಲಯ ಐಜಿಪಿ ವಿಫುಲ್‌ಕುಮಾರ್ ಭೇಟಿ ನೀಡಿದರು   

ಹೊಳೆನರಸೀಪುರ: ‘ಯಾವುದೇ ಸಂದರ್ಭ, ಸನ್ನಿವೇಶದಲ್ಲೂ ಪೊಲೀಸರು ಪ್ರಾಣದ ಹಂಗು ತೊರೆದು ಸಾರ್ವಜನಿಕರ ಪ್ರಾಣ ರಕ್ಷಣೆಗೆ ನಿಲ್ಲುತ್ತಾರೆ. ಕೋವಿಡ್ 19 ತಡೆ ಕಾರ್ಯಾಚರಣೆಯಲ್ಲಿ ತೊಡಗಿದ್ದ ನಗರದ ನಾಲ್ವರು ಪೊಲೀಸರಿಗೆ ಸೋಂಕು ತಗುಲಿದೆ. ಅವರ ಕುಟುಂಬದವರ ರಕ್ಷಣೆ ಎಲ್ಲರ ಹೊಣೆ’ ಎಂದು ದಕ್ಷಿಣ ವಲಯ ಐಜಿಪಿ ವಿಫುಲ್‌ಕುಮಾರ್ ತಿಳಿಸಿದರು.

ಪಟ್ಟಣದ ಕಂಟೈನ್‌ಮೆಂಟ್ ಪ್ರದೇಶಗಳಿಗೆ ಭೇಟಿ ನೀಡಿ, ಕ್ವಾರಂಟೈನ್‍ನಲ್ಲಿದ್ದ ಪೊಲೀಸರನ್ನು ಮಾತನಾಡಿಸಿ ಧೈರ್ಯ ತುಂಬಿದರು.

‘ಕ್ವಾರಂಟೈನ್‍ಗೆ ಒಳಗಾಗಿರುವ ಪೊಲೀಸರು 14 ದಿನ ಎಲ್ಲ ಜಂಜಾಟ ಮರೆತು ಕುಟುಂಬದವರೊಂದಿಗೆ ಕಾಲ ಕಳೆಯುವ ಅವಕಾಶ ದೊರೆತಿದೆ. ಈ ಸಮಯವನ್ನು ಸದುಪಯೋಗಪಡಿಸಿಕೊಳ್ಳಿ. ಐಪಿಸಿ, ಸಿಆರ್‌ಪಿಸಿ‌ ಪುಸ್ತಕಗಳನ್ನು
ತರಿಸಿಕೊಂಡು ಮತ್ತೊಮ್ಮೆ ಓದಿ. ಮಡದಿ, ಮಕ್ಕಳೊಂದಿಗೆ ಸಂತೋಷದಿಂದ ಕಾಲ ಕಳೆಯಿರಿ’ ಎಂದು ಹೇಳಿದರು.

ADVERTISEMENT

ಶಿಥಿಲಗೊಂಡ ಪೊಲೀಸ್ ವಸತಿ ನಿಲಯಗಳನ್ನು ವೀಕ್ಷಿಸಿದರು. ಡಿವೈಎಸ್‌ಪಿ ಲಕ್ಷ್ಮೇಗೌಡ, ಇನ್‍ಸ್ಪೆಕ್ಟರ್ ಅಶೋಕ್, ಗ್ರಾಮಾಂತರ ಠಾಣೆ ಎಸ್.ಐ. ಮೋಹನ್ ಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.