ADVERTISEMENT

ಕೃಷ್ಣೇಗೌಡ ನೌಕರರ ಸಂಘದ ಅಧ್ಯಕ್ಷ

ಖಜಾಂಚಿಯಾಗಿ ಲಿಂಗರಾಜು, ರಾಜ್ಯ ಪರಿಷತ್‌ಗೆ ಪ್ರದೀಪ್‌ ಅವಿರೋಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2019, 14:44 IST
Last Updated 11 ಜುಲೈ 2019, 14:44 IST
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾದ ಕೃಷ್ಣೇಗೌಡರನ್ನು ಸದಸ್ಯರು ಅಭಿನಂದಿಸಿದರು.‌
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾದ ಕೃಷ್ಣೇಗೌಡರನ್ನು ಸದಸ್ಯರು ಅಭಿನಂದಿಸಿದರು.‌   

ಹಾಸನ: ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾಗಿ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಕೃಷ್ಣೇಗೌಡ ಆಯ್ಕೆಯಾಗಿದ್ದಾರೆ.

ಕೃಷ್ಣೇಗೌಡ 52 ಮತ ಪಡೆದರೆ, ಇವರ ಪ್ರತಿಸ್ಪರ್ಧಿಗಳಾದ ಎಸ್. ಮಧು 17 ಮತ್ತು ನಾಯಕರಹಳ್ಳಿ ಮಂಜೇಗೌಡ ಶೂನ್ಯ ಮತಗಳಿಸಿದರು. ಒಂದು ಮತ ತಿರಸ್ಕೃತವಾಗಿದೆ.

ಬೆಳಗ್ಗೆ 11 ಗಂಟೆಗೆ ಜಿಲ್ಲಾ ಸರ್ಕಾರಿ ನೌಕರರ ಸಂಘಧ ಭವನದಲ್ಲಿ ಚುನಾವಣೆ ಪ್ರಕ್ರಿಯೆ ಆರಂಭವಾಯಿತು. ಹಾಸನ ತಾಲ್ಲೂಕಿನ 62 ಹಾಗೂ ಎಲ್ಲಾ ತಾಲ್ಲೂಕುಗಳ ಅಧ್ಯಕ್ಷರು ಸೇರಿದಂತೆ ಒಟ್ಟು 70 ಮತದಾರರು ಶಾಂತಿಯುತವಾಗಿ ಹಕ್ಕು ಚಲಾವಣೆ ಮಾಡಿದರು.

ADVERTISEMENT

ಸಂಜೆ 4 ಗಂಟೆವರೆಗೂ ಚುನಾವಣೆ ಪ್ರಕ್ರಿಯೆ ನಡೆಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಮತ ಎಣಿಕಾ ಕಾರ್ಯ ಶುರುವಾಯಿತು.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಒಟ್ಟು ಮೂವರು ಅಭ್ಯರ್ಥಿಗಳ ಪೈಕಿ ಕೃಷ್ಣೇಗೌಡ ಅತಿ ಹೆಚ್ಚು ಮತ ಪಡೆದರು. ಚುನಾವಣಾ ಅಧಿಕಾರಿಯಾಗಿ ಬಿ.ಎ.ಗೋವಿಂದರಾಜು ಕರ್ತವ್ಯ ನಿರ್ವಹಿಸಿದರು.

ಮೀನುಗಾರಿಕೆ ಇಲಾಖೆಯ ಅಧೀಕ್ಷಕ ಲಿಂಗರಾಜು ಅವರು ಖಜಾಂಚಿಯಾಗಿ ಮತ್ತು ಜಿಲ್ಲಾ ಖಜಾನೆ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಎನ್.ಪ್ರದೀಪ್ ಕುಮಾರ್ ಅವರು ರಾಜ್ಯ ಪರಿಷತ್‌ಗೆ ಜುಲೈ 6 ರಂದು ಅವಿರೋಧ ಆಯ್ಕೆಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.