ADVERTISEMENT

ಅವರು ಪವಿತ್ರ ಸರ್ಕಾರವನ್ನು ಹೇಗೆ ನಡೆಸುತ್ತಾರೆ ನೋಡೋಣ: ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2019, 10:13 IST
Last Updated 3 ಆಗಸ್ಟ್ 2019, 10:13 IST
   

ಹಾಸನ: ನಮ್ಮದು ಪಾಪದ ಸರ್ಕಾರ ಇತ್ತು, ಈಗಪವಿತ್ರ ಸರ್ಕಾರ ಬಂದಿದೆ, ಅವರುಹೇಗೆ ನಡೆಸುತ್ತಾರೆ ನೋಡೋಣ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಶನಿವಾರ ತಿಳಿಸಿದರು.

ಚಿಕ್ಕಮಗಳೂರಿನಿಂದ ಕೆ.ಆರ.ಪೇಟೆಗೆ ಹೋಗುವ ಮಾರ್ಗ ಮಧ್ಯದ ಹಾಸನದ ಪ್ರವಾಸಿ ಮಂದಿರಕ್ಕೆ ಬಂದಿದ್ದ ಕುಮಾರಸ್ವಾಮಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ನಾನು ಈಗ ಏನು ಮಾತನಾಡುವುದಿಲ್ಲ, ಜನರು ತೀರ್ಮಾನ ಕೈಗೊಳ್ಳುತ್ತಾರೆ., ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡೋಣ ಎಂದು ಕುಮಾರಸ್ವಾಮಿ‌ ಹೇಳಿದರು.

ADVERTISEMENT

ರಾಜಕೀಯ ನಿವೃತ್ತಿ ತೆಗೆದುಕೊಳ್ಳಬೇಕು ಎಂದು ತೀರ್ಮಾನ ಮಾಡಿದ್ದೆ. ಪ್ರಸ್ತುತ ರಾಜಕೀಯ ಪರಿಸ್ಥಿತಿ ಹದಗೆಟ್ಟಿದೆ ದಯವಿಟ್ಟು ನನ್ನ ಹಾಗೂ ಕುಟುಂಬವನ್ನು ನೆಮ್ಮದಿ ಯಾಗಿ ಇರಲು ಬಿಟ್ಟು ಬಿಡಿ ಎಂದು ಅವರು ಹೇಳಿದರು.

ಉಪಚುನಾವಣೆಯಲ್ಲಿನಿಖಿಲ್, ಪ್ರಜ್ವಲ್ ಸ್ಪರ್ಧೆ ವಿಚಾರ ಕಪೋಲ ಕಲ್ಪಿತವಾಗಿದೆ.ಅಧಿಕಾರಕ್ಕೆ ಅಂಟಿ ಕೂರುವ ಜಾಯಮಾನ ನನ್ನದಲ್ಲ ಎಂದರು.

ನೂತನ ಸರ್ಕಾರ ಬಂದು ಒಂದು ವಾರ ಆಗಿದೆ. ಈಗ ಏನೆನು ನಡೀತಿದೆ ಅನ್ನೋದು ನನಗೆ ಗೊತ್ತು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.